ಪೋಲಿಸ್ ಠಾಣೆಯಲ್ಲಿ ಶಸ್ತ್ರಾಸ್ತ್ರಗಳಿಗೆ ಹಾಗೂ ವಾಹನಗಳಿಗೆ ಪೂಜೆ
ಸಿಂಧನೂರು :ಅ.5.ವಿಜಯದಶಮಿ ದಿನದಂದು ರಾಜ್ಯಾದ್ಯಂತ ಆಯುಧ ಪೂಜೆ ಮಾಡಲಾಗುತ್ತಿದೆ. ಅದರಂತೆ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಶಸ್ತ್ರಾಸ್ತ್ರಗಳಿಗೆ ಹಾಗೂ ವಾಹನಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಯುಧ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಡಿವಾಯ್ ಎಸ್.ಪಿ.ವೆಂಕಟಪ್ಪ ನಾಯಕ, ಸಿಪಿಐ ರವಿಕುಮಾರ್, ಪಿಎಸ್ಐ ಯರಿಯಪ್ಪ, ಸಿಬ್ಬಂದ್ದಿಗಳಾದ ಶೆಟ್ಟೆಪ್ಪ, ಯಮನಪ್ಪ ಗಿರಿಜಾಲಿ,ಇನ್ನಿತರ ಎಲ್ಲಾ ಸಿಬ್ಬಂದಿಗಳು ತಮ್ಮ ತಮ್ಮ ಕುಟುಂಬದವರ ಜೊತೆ ಪೂಜೆಯಲ್ಲಿ ಭಾಗವಹಿಸಿದ್ದರು.ಪೋಲಿಸ್ ಸಿಬ್ಬಂದಿಗಳು ಖಾಕಿ ಯುನಿಫಾರ್ಮ್ ಬಿಟ್ಟು ರಾಮರಾಜ ವೈಟ್ ಪಂಚೆ ಹಾಗೂ ಶರ್ಟ್ ಧರಿಸಿದ್ದು ವಿಶೇಷವಾಗಿತ್ತು. ಬಿಳಿ ಬಟ್ಟೆಯನ್ನು ಧರಿಸಿದ ಪೋಲಿಸ್ ರನ್ನು ನೋಡಿದ ಸಾರ್ವಜನಿಕ ಮೆಚ್ಚುಗೆ ವ್ಯಕ್ತಪಡಿಸಿದರು..
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030