ಕೋಡಿ ಬಿದ್ದ ಗಂಡ ಬೊಮ್ಮನಹಳ್ಳಿ ಕೆರೆಗೆ ಬಾಗೀನ ಅರ್ಪಿಸಿದ ಶಾಸಕ ಎನ್.ವೈ.ಜಿ
ಕೂಡ್ಲಿಗಿ ತಾಲೂಕಿನ ಜಿಲ್ಲೆಯ ಅತಿ ದೊಡ್ಡ ಕೆರೆ ಗಂಡಬೊಮ್ಮನಹಳ್ಳಿ ಕೆರೆ ಕೋಡಿ ಬಿದ್ದಿರುವುದರಿಂದ ಶಾಸಕ ಎನ್ ವೈ ಗೋಪಾಲಕೃಷ್ಣ ಅವರು ಭೇಟಿ ನೀಡಿ ಬಾಗಿನ ಅರ್ಪಣೆ ಮಾಡಿದ್ದರು. 14 ವರ್ಷಗಳ ನಂತರ ಕೂಡಿ ಬಿದ್ದಿರುವುದರಿಂದ ಬಾಗಿನ ಅರ್ಪಿಸಿದರು. ಸುಮಾರು ಒಂದು ವಾರದಿಂದ ಸುರಿದ ಅಕಾಲಿಕ ಮಳೆಗೆ ರಾಮದುರ್ಗ ಕೆರೆ ತುಂಬಿದ್ದು ಕೆರೆ ವೀಕ್ಷಣೆ ಮಾಡಿ ಬಾಗಿನ ಅರ್ಪಿಸಿದರು. ಕೂಡ್ಲಿಗಿ ತಾಲೂಕಿನಾದ್ಯಂತ ಒಂದು ವಾರದಿಂದ ಸುರಿದ ಅಕಾಲಿಕ ಮಳೆಗೆ ಕೆರೆಗಳು ತುಂಬಿದ್ದು ಅದರಂತೆ ಗಂಡ ಬೊಮ್ಮನಹಳ್ಳಿ ಕೆರೆಯು ಕೋಡಿ ಬಿದ್ದಿದು ಕೆರೆಗೆ ಭೇಟಿ ನೀಡಿ ಕೆರೆ ವೀಕ್ಷಣೆ ಮಾಡಿ ಬಾಗಿನ ಅರ್ಪಿಸಿದರು. ಗಂಡ ಬೊಮ್ಮನಹಳ್ಳಿ ಕೆರೆ ಇತಿಹಾಸ ಪ್ರಸಿದ್ಧ ಕೆರೆ ಇಂದು ಆಗಿದೆ. ಸುತ್ತಮುತ್ತಲಿನ ಹಳ್ಳಿಗಳಿಗೆ ರೈತರ ಹೊಲಗಳಿಗೆ, ಕುಡಿಯುವ ನೀರು ಒದಗಿಸುವ ಕೆರೆ ಇದಾಗಿದೆ.ಈ ಸಂದರ್ಭದಲ್ಲಿ ಗುಂಡು ಮುಣಗು ತಿಪ್ಪೇಸ್ವಾಮಿ, ಗುಂಡುಮುಣುಗು ಪ್ರಕಾಶ್ ಮತ್ತು ಸೂರ್ಯ ಪಾಪಣ್ಣ, ಟಿ ರೇವಣ್ಣ, ಎಇಇ ಕೋಟ್ರಬಸಪ್ಪ, ಗುಡೆಕೋಟೆ ರಾಜಣ್ಣ, ಗ್ರಾಮ ಪಂಚಾಯತಿ ಅಧ್ಯಕ್ಷ ಇಂದ್ರಮ್ಮ ಸೋಮಣ್ಣ, ಉಪಾಧ್ಯಕ್ಷೆ ರತ್ನಮ್ಮ ಹೊನ್ನಪ್ಪ,ಎಕ್ಕೇಗುಂದಿ ನಾಗರಾಜ್. ಪಾಪಣ್ಣ.ಶಾಸಕರ ಆಪ್ತ ಸಹಾಯಕ ಶ್ರೀಕಾಂತ್ ಹಾಗೂ ಅಭಿವೃದ್ಧಿ ಅಧಿಕಾರಿ ಬಸವರಾಜಪ್ಪ, ಹೂಡೇಂ ಪಾಪನಾಯಕ್, ಬಿಜೆಪಿ ಮುಖಂಡ ಮಾರಮನಹಳ್ಳಿ ಬೊಮ್ಮಲಿಂಗಪ್ಪ ಸೇರಿದಂತೆ ಬಿಜೆಪಿ ಮುಖಂಡರು ಗ್ರಾಮ ಪಂಚಾಯತಿ ಸದಸ್ಯರು, ಸಾರ್ವಜನಿಕರು ಇದ್ದರು..
ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030