ಕ್ರಿಕೆಟ್ ನಿರ್ಣಾಯಕರು (ಅಂಪಾಯರ್) ಮತ್ತು ಸ್ಕೋರರ್ಗಳ ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಿ.
ಸುಧೀಂದ್ರ ಪಿ.ಸಿಂದ್ಯೆ
ಸಿಂಧನೂರು ಜೂಲೈ 6 ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಬೆಂಗಳೂರು ಇವರ ಆಶ್ರಯದಲ್ಲಿ ರಾಯಚೂರು ವಲಯದಿಂದ ಕ್ರಿಕೆಟ್ ನಿರ್ಣಾಯಕರು (ಅಂಪಾಯರ್) ಮತ್ತು ಸ್ಕೋರರ್ಗಳ ಲಿಖಿತ ಪರೀಕ್ಷೆಯನ್ನು ರಾಯಚೂರು ವಲಯ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ಸದಸ್ಯರು ಬೆಂಗಳೂರು ಹಾಗೂ ಸಂಚಾಲಕರು ರಾಯಚೂರು ಕ್ರಿಕೆಟ್ ವಲಯ ಸುಧೀಂದ್ರ ಪಿ.ಸಿಂದ್ಯೆ ಹೇಳಿದರು.
ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಪ್ರತ್ಯೇಕವಾಗಿ ಅಂಪಾಯರ್ ಅಥವಾ ಸ್ಕೋರರ್ ಒಂದನ್ನು ಆಯ್ಕೆ ಮಾಡಿ ಮಾನ್ಯ ಸಂಚಾಲಕರು ರಾಯಚೂರು ವಲಯ ಇವರಿಗೆ ಲಗತ್ತಿಸಿದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಹತೆ : ಅರ್ಜಿದಾರರ ವಯಸ್ಸು 01-09-2022ಕ್ಕೆ 40 ವರ್ಷಗಳು ಮೀರಿರಬಾರದು ಹಾಗೂ ಕ್ಲಬ್ ಲೆವೆಲ್ ಕ್ರಿಕೇಟ್ನಲ್ಲಿ ಭಾಗವಹಿಸಿರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16ನೇ ಜುಲೈ 2022 ಸಂಜೆ 5.00 ಗಂಟೆಯೊಳಗಾಗಿ ಸಲ್ಲಿಸತಕ್ಕದ್ದು.ಅರ್ಜಿ ಸಲ್ಲಿಸುವ ವಿಳಾಸ :ಶ್ರೀ ಕೆ.ಭೀಮಾಚಾರ್ಯ, ಕಚೇರಿ ವ್ಯವಸ್ಥಾಪಕರು, ಕೆ.ಎಸ್.ಸಿ.ಎ., ನಂ. 4-4-223/90.
ಸತ್ಯನಾಥ ಕಾಲೋನಿ, ಮಂತ್ರಾಲಯಂ ರೋಡ್, ರಾಯಚೂರು-584103.
ಹೆಚ್ಚಿನ ಮಾಹಿತಿ ಹಾಗೂ ಸಹಾಯಕ್ಕಾಗಿ ಸಂಪರ್ಕಿಸಿ : ಕಚೇರಿ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ರಾಯಚೂರು ವಲಯ, Ja: 82776958628217641006: kbc1956@yahoo.ಇನ್…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030