ಮಗುವಿಗೊಂದು ಮರ, ಮನೆಗೊಂದು ಮರ ಊರಿಗೊಂದು ವನ.
ಮಾನ್ವಿ : ಜುಲೈ. 6.ತಾಲೂಕಿನ ಮಲ್ಲದಗುಡ್ಡ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಕೆಲವು ದಿನಗಳ ಹಿಂದೆ ವನಸಿರಿ ಪೌಂಡೇಶನ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ವನಸಿರಿ ಪೌಂಡೇಶನ ಕಾರ್ಯಕ್ಕೆ ಕೈಜೋಡಿಸುತ್ತೇವೆಂದು ಶಾಲೆಯ ಪ್ರತಿ ಮಕ್ಕಳಿಗೆ ಒಂದೊಂದು ಸಸಿಗಳನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ವಿತರಿಸಿ ಮಗುವಿಗೊಂದು ಸಸಿ ಎನ್ನುವಂತೆ ” ಮನೆಗೊಂದು ಮರ ಊರಿಗೊಂದು ವನ” ವನ್ನು ಮಾಡುವುದಾಗಿ ಅಲ್ಲಿನ ಶಿಕ್ಷಕರು ಆಡಳಿತ ಮಂಡಳಿಯ ಸದಸ್ಯರು ಘೋಷಿಸಿದ್ದರು. ಅದರಂತೆ ಇಂದು ಮಗುವಿಗೊಂದು ಸಸಿಗಳಂತೆ ಸುಮಾರು 180 ಸಸಿಗಳನ್ನು ವಿತರಿಸಿದರು. ತುಂಬಾ ಅದ್ಭುತವಾದ ಕಾರ್ಯ ಎಲ್ಲಾ ಶಾಲೆಗಳಲ್ಲಿಯೂ ಇಂತಹ ಕಾರ್ಯಗಳನ್ನು ಕೈಗೊಂಡರೆ ಅದುವೆ ವನಸಿರಿ ತಂಡ ಕಾರ್ಯ ನಿರ್ವಹಿಸಿದ್ದಕ್ಕೆ ತುಂಬಾ ಸಾರ್ಥಕವಾಗುತ್ತದೆ. ಎಲ್ಲಾ ಮಕ್ಕಳಿಗೆ ಸಸಿಗಳನ್ನು ವಿತರಿಸಿದ ಶಾಲಾ ಆಡಳಿತ ಮಂಡಳಿಗೆ ಅಮರೇಗೌಡ ಮಲ್ಲಾಪೂರು ವನಸಿರಿ ಫೌಂಡೇಶನ್ ವತಿಯಿಂದ ದನ್ಯವಾದ ತಿಳಿಸಿದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030