ರಂಗಮಂದಿರಕ್ಕೆ ಡಾ.ಪುನಿತ್ ರಾಜಕುಮಾರ ಹೆಸರು ನಾಮಕರಣ ಮಾಡಲು ಒತ್ತಾಯ.
ಸಿಂಧನೂರು : ಜುಲೈ 5.ಪಟ್ಟಣದ ವಾರ್ಡ ನಂ 24 ರಲ್ಲಿ ಬಾದರ್ಲಿ ಹಂಪನಗೌಡ ಮಾಜಿ ಶಾಸಕರು ಇವರ ಮನೆಯ ಹಿಂಬಾಗದಲ್ಲಿರುವ ನಗರಸಭೆ ಅಧೀನದಲ್ಲಿರುವ ರಂಗಮಂದಿರಕ್ಕೆ ಡಾ.ಪುನಿತ್ ರಾಜಕುಮಾರ ಹೆಸರು ನಾಮಕರಣ ಮಾಡುವಂತೆ ಡಾ.ಪುನೀತ್ ರಾಜಕುಮಾರ (ಅಪ್ಪು) ಅಭಿಮಾನಿಗಳ ಬಳಗ ವತಿಯಿಂದ ನಗರಸಭೆ ಪೌರಾಯುಕ್ತರಿಗೆ ಹಾಗೂ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೌನೇಶ ದೊರೆ ಮಾತನಾಡಿ ಕನಡ ಚಲನಚಿತ್ರ ಖ್ಯಾತ ನಟರಾದ ದಿವಂಗತ ವರನಟ ಡಾ. ರಾಜಕುಮಾರ ಇವರ ಮಗನಾದ ಡಾ. ಪುನಿತ್ ರಾಜಕುಮಾರ (ಅಪ್ಪು) ರವರು ನಿಧನರಾಗಿದ್ದು,ಇವರು ಬಲಗೈಲಿಯಿಂದ ಮಾಡಿದ್ದು ಎಡಗೈಗೆ ಗೊತ್ತಾಗದೆ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರು ಒಬ್ಬ ಒಳ್ಳೆಯ ನಟ, ಗುಣವಂತ ಮತ್ತು ಬಹಳಷ್ಟು ಬಡವರ ಬಾಳಿಗೆ ದಾರಿದೀಪವಾದ ನಟನಾಗಿದ್ದು,ಇವರು ಅಗಲಿದ್ದು ರಾಜ್ಯದ ಕೋಟ್ಯಾಂತರ ಅಭಿಮಾನಿಗಳಿಗೆ ನೋವುಂಟಾಗಿದೆ , ಒಳ್ಳೆಯ ನಟನನ್ನು ಕಳೆದುಕೊಂಡ ನಾವುಗಳು ಬಹಳ ದುಃತಸ್ಥರಾಗಿದ್ದು,ಇವರ ನೆನಪು ಯಾವತ್ತೂ ರಾಜ್ಯದ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೆ ಉಳಿದುಕೊಳ್ಳುತ್ತದೆ ಅದಕ್ಕಾಗಿಯೇ ಅವರ ಹೆಸರು ಉಳಿಯಬೇಕಾದರೆ ರಂಗಮಂದಿರಕ್ಕೆ ಇಡಬೇಕೆಂದು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ದೌವಲ್ ಸಾಬ್, ಮೌನೇಶ ಬಡಿಗೇರ, ಸಿ.ಬಿ ಸ್ವಾಮಿ, ದುರುಗೇಶ್, ಪಿ. ರಾಘವೇಂದ್ರ, ಖಾಜಾ ಹುಸೇನ್ ಬನ್ನಿಗನೂರ ನಾಗರಾಜ್ ಕವಿತಾಳ, ಕಾಳಪ್ಪ ಮೇಸ್ತ್ರಿ, ಬಸವರಾಜ ಕೊಂಡೆ, ಸಲೀಮ್ ತುರಕಟ್ಟಿ, ಲಕ್ಷ್ಮಿ ಪತ್ತಾರ್, ಬಸವರಾಜ ಟೇಲರ್, ಇನ್ನಿತರಿದ್ದರು..
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030