ಬೆಳಗಾವಿ ಜಿಲ್ಲೆಯ ವತಿಯಿಂದ ಗುರು ಪೂರ್ಣಿಮೆಯ ನಿಮಿತ್ಯ ಗುರುವಂದನಾ ಕಾರ್ಯಕ್ರಮ: ವಿವೇಕರಾವ್ ಪಾಟೀಲ…!!!

Listen to this article

ಬೆಳಗಾವಿ ಜಿಲ್ಲೆಯ ವತಿಯಿಂದ ಗುರು ಪೂರ್ಣಿಮೆಯ ನಿಮಿತ್ಯ ಗುರುವಂದನಾ ಕಾರ್ಯಕ್ರಮ: ವಿವೇಕರಾವ್ ಪಾಟೀಲ
ರಾಯಬಾಗ: ಗುರು ಪೂರ್ಣಿಮೆಯ ಉತ್ಸವವನ್ನು ದೇಶಾದ್ಯಂತ ಸಡಗರದಂತೆ ಆಚರಿಸಲಾಗುತ್ತದೆ. ನಮ್ಮ ದೇಶದಲ್ಲಿ ಗುರುವಿಗೆ ವಿಶೇಷ ಸ್ಥಾನಮಾನವಿದೆ. ನಮ್ಮ ಸಮಾಜದ ಗುರುವಿನ ಗುರುವಂದನಾ ಕಾರ್ಯಕ್ರಮವನ್ನು
ಈ ಬಾರಿ ಬೆಳಗಾವಿ ಜಿಲ್ಲೆಯ ಹಾಲು ಮತ ಸಮಾಜದಿಂದ ಇದೇ 13 ರಂದು ಕಾಗಿನೆಲೆ ಕನಕಪೀಠದಲ್ಲಿ ಲಿ.ಬೀರೇಂದ್ರ ಕೇಶವತಾರಕಾನಂದ ಪುರಿ ಸ್ವಾಮೀಜಿಯವರ 16 ನೇ ಪುಣ್ಯತಿಥಿಯನ್ನು ಜಗದ್ಗುರು ನಿರಂಜನಾನಂದ ಪುರಿ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ಗುರುವಂದನಾ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದು ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷ ವಿವೇಕರಾವ್ ಪಾಟೀಲ ಮಾಹಿತಿ ನೀಡಿದರು. ವಿವೇಕರಾವ್ ಪಾಟೀಲ ಸೋಮವಾರ ಜಿಲ್ಲೆಯ ಕುರುಬ ಸಮಾಜದ ಬಾಂಧವರೊಂದಿಗೆ ಕಾಗಿನೆಲೆ ಕನಕ ಗುರುಪೀಠ ಹಾವೇರಿಗೆ ತೆರಳಿ ಕಾರ್ಯಕ್ರಮದ ಆಯೋಜನೆ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕನಕ ಗುರುಪೀಠದ ಜಗದ್ಗುರು ನಿರಂಜನಾ ಪುರಿ ಸ್ವಾಮೀಜಿಯವರು ವಿವೇಕರಾವ್ ಪಾಟೀಲರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ರಾಜ್ಯಾದ್ಯಕ್ಷ ಬಾ. ರಾಜೇಂದ್ರ ಸಣ್ಣಕ್ಕಿ, ಜಿಲ್ಲಾ ಅಧ್ಯಕ್ಷ ಮಡ್ದೆಪ್ಪ ತೊಳಿನವರ್, ಭಗವಂತ ಬಂತಿ, ಶಿವಪುತ್ರ ಹಾಡಕಾರ, ಸಿದ್ಲಿಂಗ ದಳವಾಯಿ, ವಿನಾಯಕ ಬನಹಟ್ಟಿ, ಎಚ್. ಎಸ್. ನಸಲಾಪೂರೆ, ಬಾಬುರಾವ್ ವಾಘಮೊಡೆ, ಶ್ರೀಕಾಂತ ಚೌಗುಲಾ, ಸಿದ್ದಪ್ಪ ಹಾಡಕಾರ ಮತ್ತು ದುಂಡಪ್ಪ ಹಾಡಕಾರ ಇದ್ದರು…

ವರದಿ. ಮಹಾಲಿಂಗ ಗಗ್ಗರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend