ಕರ್ನಾಟಕ ಗ್ರಾಮೀಣ ಬ್ಯಾಂಕ್ : ಶಾಖಾಧಿಕಾರಿ ವಯೋವೃತ್ತಿ ಸನ್ಮಾನ…!!!

Listen to this article

ಕರ್ನಾಟಕ ಗ್ರಾಮೀಣ ಬ್ಯಾಂಕ್ : ಶಾಖಾಧಿಕಾರಿ ವಯೋವೃತ್ತಿ ಸನ್ಮಾನ.

ರಾಯಚೂರು : ಜಿಲ್ಲೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು .

ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕರಾದ ನಿಂಗಪ್ಪ ಅವರು ತಮ್ಮ ಸುದೀರ್ಘವಾದ ಸೇವೆಯನ್ನು ಬ್ಯಾಂಕಿಗೆ ಸಲ್ಲಿಸಿ ದಿನಾಂಕ ಮೇ 31 ರಂದು ನಿವೃತ್ತಿಯಾದರು .ಅಂದಿನ ಅತಿ ಕಷ್ಟದ ದಿನಗಳಲ್ಲಿ ಬ್ಯಾಂಕಿಗೆ ಸೇರಿ ರೈತರ , ಬಡವರ ಅಭಿವೃದ್ದಿಯ ಬಗ್ಗೆ ಕಾಳಜಿ ವಹಿಸಿ, ಶ್ರಮಿಸಿ ಹಾಗೂ ಬ್ಯಾಂಕಿನ ಕೆಲಸದ ಜೊತೆಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಂಘಟನೆಯನ್ನು ಸ್ಥಾಪಿಸಿ ತಮ್ಮ ಬ್ಯಾಂಕಿನ ಉದ್ಯೋಗಿಗಳ ಏಳಿಗೆಗೆ ಶ್ರಮಪಟ್ಟು ಇವತ್ತಿನ ದಿನ ಪರಿಶಿಷ್ಟ ಜಾತಿ -ಪರಿಶಿಷ್ಟ ಪಂಗಡ ದವರನ್ನು ಗುರುತಿಸುವ ಹಾಗೆ ಮಾಡಿದ ಹಿರಿಯರಲ್ಲಿ ನಿಂಗಪ್ಪ ಅವರು ಕೂಡ ಒಬ್ಬರು . ಹಾಗಾಗಿ ಅವರಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವತಿಯಿಂದ ಅವರಿಗೆ ಶುಭಹಾರೈಸುತ್ತಾ ಅವರ ನಿವೃತ್ತಿ ಜೀವನ ಸದಾ ಸುಖಃ , ಶಾಂತಿ , ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸುತ್ತಾ ಸನ್ಮಾನಿಸಲಾಯಿತು .

ಇತ್ತೀಚೆಗೆ ವರ್ಗಾವಣೆಯಾಗಿ ಬಂದಂತಹ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಪ್ರಭಂದಕರಾದ ಜಗನ್ನಾಥ ಅವರನ್ನು ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರಾಯಚೂರು ಜಿಲ್ಲಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು .

ಈ ಸಂಧರ್ಭದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಾಧ್ಯಕ್ಷರಾದ ರಾಮಪ್ಪ ( ಸಿಂಧನೂರು ), ಜಂಟಿ ಕಾರ್ಯದರ್ಶಿ ಯಾದ ಶ್ರೀ ರಮೇಶ್ ಬಾಬು ಪ್ರಾದೇಶಿಕ ಕಚೇರಿ ರಾಯಚೂರು, ಸಂಘಟನಾ ಕಾರ್ಯದರ್ಶಿ ಯಾದ ಅನಿಲ್ ಕುಮಾರ್ , ಜಿಲ್ಲಾ ಕಾರ್ಯದರ್ಶಿ ಅರುಣ್ ಕುಮಾರ್ ಹಾಗೂ ಸಿಸಿ ಮೆಂಬರ್ಸ್ ದುರ್ಗಪ್ಪ , ರವಿಕುಮಾರ್ , ಗೋವಿಂದ್ , ಇತರರು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend