ಗುತ್ತೆದಾರ ಸಂಘದ ಅಧ್ಯಕ್ಷರನ್ನಾಗಿ ಅಶೋಕ ಕುಮಾರ ಆಯ್ಕೆ.
ಸಿಂಧನೂರು : ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕುಮಾರ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ ಜಾಸ್ತಿಯಾಗಿರುವರಿಂದ ಸಂಪೂರ್ಣ ನಿರ್ನಾಮವಾಗದಿದ್ದರು,ಕಡಿವಾಣ ಹಾಕಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಗುತ್ತೆದಾರ ಸಂಘದ ಸದಸ್ಯರುಗಳ ಸಮಸ್ಯೆಗಳಿಗೆ ನನಗೆ ತಿಳಿಸಿದರೆ ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಸರ್ವಾನುಮತದಿಂದ ಗುತ್ತೇದಾರ ಸಂಘದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದಕ್ಕೆ ಸದಸ್ಯರುಗಳಿಗೆ ಧನ್ಯವಾದಗಳನ್ನು ತಿಳಿಸಿದರು.
ರವಿವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಸರ್ವಾನುಮತದಿಂದ ಗುತ್ತೆದಾರರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ ಕುಮಾರ ಮಾತನಾಡಿದರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷರಾದ ಅಶೋಕ ಕುಮಾರಗೆ ಸಂಘದ ಸದಸ್ಯರು ಸನ್ಮಾನಿಸಿ ಸಿಹಿ ಹಂಚಿ ಶುಭಾಶಯ ತಿಳಿಸಿದರು.
ನೂತನ ಪದಾಧಿಕಾರಿಗಳು : ಗೌರವಾಧ್ಯಕ್ಷರಾಗಿ ದೊಡ್ಡ ಬಸವನಗೌಡ ಹೊಸಳ್ಳಿ ಪ್ರಥಮ ದರ್ಜೆ ಗುತ್ತೆದಾರರು,
ಅಧ್ಯಕ್ಷರು ಅಶೋಕ್ ಕುಮಾರ ಪ್ರಥಮ ದರ್ಜೆ ಗುತ್ತೆದಾರರು, ಜಿ.ಟಿ, ಉಪಾಧ್ಯಕ್ಷರನ್ನಾಗಿ ವೀರಭದ್ರಪ್ಪ ಗೊರೆಬಾಳ, ಅಕ್ಬರ್ ಪಾಷ, ನಾಗಪ್ಪ ಗಿರಿಜಾಲಿ , ಆಂಜನೇಯ ರಾಗಲಪರ್ವಿ, ಪ್ರಧಾನ ಕಾರ್ಯದರ್ಶಿಗಳಾಗಿ ಮಹೇಶ ಕುಮಾರ್ ಗೊನ್ವಾರ, ಕಾರ್ಯದರ್ಶಿಯನ್ನಾಗಿ ಬಿ ಶಂಬಣ್ಣ , ಖಜಾಂಚಿ ಪದ್ಮ ನಾಯ್ಡು, ಸಹ ಕಾರ್ಯದರ್ಶಿಗಳಾಗಿ ಶರಣೆಗೌಡ ಗಿಣಿವಾರ, ಶರಣಬಸವ ಮೆರನಾಳ, ಹುಸೇನ್ ಬಾಷಾ, ಕಾರ್ಯಕಾರಿಣಿ ಸದಸ್ಯರನ್ನಾಗಿ ಸುಭಾಷ್ ,ಅಂಬಣ್ಣ ಕೊಳಂದ ಸ್ವಾಮಿ,ಅಶೋಕ್ ನಂಜಲದಿನ್ನಿ ಜಕ್ಕರಾಯ, ಸೈಯದ್, ಇವರನ್ನು ಆಯ್ಕೆ ಮಾಡಲಾಯಿತು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030