ಮೊಳಕಾಲ್ಮೂರು: ಸಿಡಿಲು ಬಡಿದು ಮೃತಪಟ್ಟ ಯರಿಸ್ವಾಮಿ ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ಸಚಿವ ಶ್ರೀರಾಮುಲು.!!

Listen to this article

ಚಿತ್ರದುರ್ಗ: ಮೊಳಕಾಲೂರು ತಾಲೂಕಿನ ನಲ್ಲಾರೆಡ್ಡಿ ಕೊಂಡಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟ ಯರಿಸ್ವಾಮಿ ಕುಟುಂಬದವರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಸಮಾಜ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು 5 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದರು. ತಾಲೂಕಿನ ದೇವಸಮುದ್ರ ಹೋಬಳಿಯ ನಲ್ಲಾರೆಡ್ಡಿ ಕೊಂಡಾಪುರ ಗ್ರಾಮದಲ್ಲಿ ಕಳೆದ ಏ.14ರಂದು ಸಿಡಿಲು ಬಡಿದು ಯರ್ರಿಸ್ವಾಮಿ ಎಂಬುವರು ಮೃತಪಟ್ಟಿದ್ದರು. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಇನ್ನಿತರ ಅಧಿಕಾರಿವರ್ಗದವರು ಭೇಟಿ ಪರಿಶೀಲಿಸಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿಯಲ್ಲಿ ಪರಿಹಾರ ಕಲ್ಪಿಸಲು ಅಧಿಕಾರಿಗಳು ಸರ್ಕಾರದ ಗಮನಕ್ಕೆ
ತರಲಾಗಿತ್ತು. ಸರ್ಕಾರವು ಪರಿಹಾರದ ಹಣ ಮಂಜೂರು ಮಾಡಲಾಗಿದ್ದು ತಾಲೂಕಿನ ರಾಂಪುರ ಗ್ರಾಮದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸಚಿವ ಶ್ರೀರಾಮುಲು ಮೃತರ ಪತ್ನಿಗೆ ಪರಿಹಾರದ ಚೆಕ್ ವಿತರಿಸಿದರು. ತಹಶೀಲ್ದಾರ್ ಟಿ.ಸುರೇಶ್ ಕುಮಾರ್, ಉಪ ತಹಶೀಲ್ದಾರ್ ಮಹಾಂತೇಶ್, ಡಾ.ಪಿ.ಎಂ.ಮಂಜುನಾಥ, ಪಿ ಲಕ್ಷ್ಮಣ್ಣ ಪಂ.ಪ ಅಧ್ಯಕ್ಷ, ಟಿ.ರವಿಕುಮಾರ್, ಪರಮೇಶ್ವರಪ್ಪ, ಪಾಪೇಶ್ ನಾಯಕ, ಸಂಜೀವಪ್ಪ, ಬಿ.ವಿಜಯ್, ತಿಪ್ಪೇಸ್ವಾಮಿ, ಎನ್.ಬಿ.ಪರಮೇಶ್ವರಪ್ಪ ಸಿದ್ದಾರ್ಥ, ಪಿ.ಎಸ್.ಐ ಗುಡ್ಡಪ್ಪ ಎ.ಎಸ್.ಐ. ಪಿ.ಧರಣೇಶಪ್ಪ ಗ್ರಾಮ ಲೆಕ್ಕಾ ಧಿಕಾರಿಗಳಾದ ಶ್ರೀಧರ, ಶ್ರೀನಿವಾಸ್, ಬಸವರಾಜ್, ಸಿಬ್ಬಂದಿಗಳಾದ ಮಂಜುನಾಥ ಅನಿಲ್, ರಘುವೀರ್ ಹಾಗೂ ಇನ್ನಿತರ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend