ಕ್ಷೇತ್ರದಲ್ಲಿ ಅಧಿಕ ಜನಸಂಖ್ಯೆ ಇರುವ ಮ್ಯಾಸನಾಯಕ ಸಮುದಾಯದವರಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಒತ್ತಾಯ
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮ್ಯಾಸನಾಯಕ ಬುಡಕಟ್ಟು ಸಮುದಾಯದ ಮತದಾರರಿದ್ದು ಈ ಜನಾಂಗದವರಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಮಾಜಿ ಗ್ರಾಪಂ ಅಧ್ಯಕ್ಷರಾದ ಮ್ಯಾಸರಹಟ್ಟಿ ಮಲ್ಲಿಕಾರ್ಜುನ ಒತ್ತಾಯಿಸಿದ್ದಾರೆ.
ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರದಂದು ನಡೆದ ಮ್ಯಾಸನಾಯಕ ಜಾಗೃತಿ ವೇದಿಕೆಯಿಂದ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ವಿಧಾನಸಭಾ ಕ್ಷೇತ್ರದಲ್ಲಿ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಮ್ಯಾಸನಾಯಕ ಜನಾಂಗದವರಿಗೆ ಕಾಂಗ್ರೆಸ್ ಪಕ್ಷವು ಕಳೆದ ಬಾರಿ ಟಿಕೆಟ್ ನೀಡುವ ಮೂಲಕ ರಾಜಕೀಯ ಪ್ರಾತಿನಿಧ್ಯ ನೀಡಿತ್ತು,ಈ ಬಾರಿಯೂ ಕೂಡ ಜನಾಂಗದವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದಲ್ಲಿ ಪಕ್ಷ ಗೆಲುವು ಸಾಧಿಸಲು ಸಾಧ್ಯವಿದೆ.
ಹಲವಾರು ವರ್ಷಗಳಿಂದ ಮ್ಯಾಸನಾಯಕ ಜನಾಂಗದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ,ಆದರೆ ಇತ್ತೀಚಿಗೆ ಕ್ಷೇತ್ರದಲ್ಲಿ ಕೈ ಟಿಕೆಟ್ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಿದ್ದು ಯಾವುದೇ ಕಾರಣಕ್ಕೂ ಮ್ಯಾಸನಾಯಕ ಜನಾಂಗದವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಕೊಂಡ್ಲಹಳ್ಳಿ ಗ್ರಾಪಂ ಅಧ್ಯಕ್ಷರಾದ ಕರಿಬಸಣ್ಣ ಮಾತನಾಡಿ ಮ್ಯಾಸನಾಯಕರೇ ಅಧಿಕ ಸಂಖ್ಯೆಯ ಬಾಹುಳ್ಯವಿರುವ ಕ್ಷೇತ್ರ ಇದಾಗಿದೆ.
ಕ್ಷೇತ್ರದಲ್ಲಿ ಮ್ಯಾಸನಾಯಕ ಜನಾಂಗದವರಿಗೆ ಟಿಕೆಟ್ ನೀಡಿದ್ದಲ್ಲಿ ಮಾತ್ರ ನೆರೆಯ ಕೂಡ್ಲಿಗಿ ಚಳ್ಳಕೆರೆ ಜಗಳೂರು ಹಿರಿಯೂರು ಪಾವಗಡ ಸಂಡೂರು ಹೊಸಪೇಟೆ ಚಿತ್ರದುರ್ಗ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರೂ ಧೃತಿಗೆಡದ ಕಾಂಗ್ರೆಸ್ ಮುಖಂಡರಾದ ಡಾ. ಬಿ.ಯೋಗೇಶ್ ಬಾಬು ನಿರಂತರವಾಗಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಾ ಪಕ್ಷವನ್ನು ಬಲಪಡಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ.ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ಕೈ ಟಿಕೆಟ್ ಹೆಸರಲ್ಲಿ ಹಲವರ ಹೆಸರು ಕೇಳಿ ಬರುತ್ತಿದ್ದು ಈ ಎಲ್ಲಾ ವದಂತಿಗಳಿಗೆ ಕಾಂಗ್ರೆಸ್ ಹೈಕಮಾಂಡ್ ಪೂರ್ಣ ವಿರಾಮ ಹಾಕಿ ಕ್ಷೇತ್ರಕ್ಕೆ ಅಧಿಕೃತ ಅಭ್ಯರ್ಥಿಯನ್ನಾಗಿ ಪಕ್ಷಕ್ಕಾಗಿ ದುಡಿದ ಡಾ.ಬಿ ಯೋಗೇಶ್ ಬಾಬುರವರನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು
ಸ್ಥಳದಲ್ಲಿ ರಾಯಾಪುರ ಗ್ರಾಪಂ ಅಧ್ಯಕ್ಷರಾದ ಜಿಬಿ ಪಾಪಣ್ಣ ತುಮಕೂರ್ಲಹಳ್ಳಿ ಗ್ರಾಪಂ ಅಧ್ಯಕ್ಷರಾದ ಲಕ್ಷ್ಮೀದೇವಿ ತಿಪ್ಪೇಸ್ವಾಮಿ ಮುಖಂಡರಾದ ಬಸಣ್ಣ ಟಿಎಸ್ ಪಾಲಯ್ಯ ಗ್ರಾಪಂ ಸದಸ್ಯರಾದ ತಿಪ್ಪೇಸ್ವಾಮಿ ಕುಮಾರಸ್ವಾಮಿ ಸೇರಿದಂತೆ ಸಮುದಾಯದ ಮುಖಂಡರಿದ್ದರು…
ವರದಿ. ಸುರೇಶ್. ಕೆ,
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030