ಚಿತ್ರದುರ್ಗ: ಮೊಳಕಾಲ್ಮೂರು / ಅಂಬೇಡ್ಕರ್ ಸ್ವಾಭಿಮಾನಿ ಸೇನೆಯಿಂದ ಮೊಳಕಾಲ್ಮೂರು ತಹಶೀಲ್ದಾರ್ ಟಿ ಸುರೇಶ್ ಕುಮಾರ್ ರವರಿಗೆ ಮನವಿ. ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಬಳಿ ಇರುವ ಇಸಾಮುದ್ರ ಗ್ರಾಮದ ಶಶಿಕಲಾ ಉಪ್ಪಾರ ವಯಸ್ಸು ಕೇವಲ 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಈ ಕೂಡಲೇ ಬಂಧಿಸುವಂತೆ ಮನವಿ ಸಲ್ಲಿಸಿ ಮಾತನಾಡಿದ ತಾಲ್ಲೂಕು ಘಟಕ ಅಧ್ಯಕ್ಷರಾದ ಹೆಚ್ ಮಂಜುನಾಥ ರವರು ಬೇರೊಂದು ರಾಜ್ಯ, ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಘಟನೆಗಳು ಕೇಳಿದಾಗ ಮನಸ್ಸಿಗೆ ಎಷ್ಟೋ ನೋವಾಗಿದೆ ಆದರೆ ಈಗ ನಮ್ಮ ಜಿಲ್ಲೆಯಲ್ಲೇ ನಡೆದಿರುವ ಘಟನೆ ಮನಕಲಕುವಂತಿದೆ ಆದ್ದರಿಂದ ಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆಯಾಗಿ ಶಶಿಕಲಾ ಕುಟುಂಬಕ್ಕೆ ನ್ಯಾಯಸಿಗಬೇಕಾದ ಕೆಲಸವಾಗಬೇಕಿದೆ ಇಷ್ಟೇಲ್ಲಾ ನಡೆದಿದ್ದರು ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಅರೋಪಿಯನ್ನು ಇದುವರೆಗೂ ಬಂಧಿಸಿರುವುದಿಲ್ಲ ತುಂಬಾ ಖಂಡನೀಯ ವಿಚಾರವಾಗಿದೆ. ಡಾ ಬಿ ಆರ್ ಅಂಬೇಡ್ಕರ್ ರವರು ಈ ರೀತಿಯ ಘಟನೆಗಳನ್ನು ಮನಗಂಡು ಅಂದೆ ಸಂವಿಧಾನ ರಚಿಸುವಾಗ ಮಹಿಳೆಯರ ರಕ್ಷಣೆಗಾಗಿ ತುಂಬಾ ಅಚ್ಚುಕಟ್ಟಾಗಿ ದಿಟ್ಟ ಕಾನೂನನ್ನು ರಚನೆ ಮಾಡಿದ್ದಾರೆ ಆದರೆ ಮಹಿಳೆಯರ ರಕ್ಷಣೆಗಾಗಿ ಕಾನೂನು ಕ್ರಮ ಇನ್ನೂ ಸರಿಯಾಗಿ ಸಮರ್ಪಕವಾಗಿ ಅನುಷ್ಠಾನಗೊಳ್ಳದಿರುವುದು ಬೇಸರದ ಸಂಗತಿ ಎಂದು ಹೇಳಿದರು ಈ ಸಂಧರ್ಭದಲ್ಲಿ ಸೇನೆಯ ಪದಾದಿಕಾರಿಗಳಾದ ಪೃಥ್ವಿ, ಭಾನು, ಚೇತನ್, ಇನ್ನೂ ಮುಂತಾದವರು ಹಾಜರಿದ್ದರು ವರದಿ -ಭಟ್ರಹಳ್ಳಿ ಧನಂಜಯ ಇನ್ನು ಮುಂತಾದವರು ಉಪಸ್ಥಿತರಿದ್ದರು…
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030