ಚಿತ್ರದುರ್ಗ: ಮೊಳಕಾಲ್ಮೂರು ನಲ್ಲಿ ನಡೆಯುವ ಸೈಕಲ್ ಜಾತ ಬಗ್ಗೆ ಭಾಗವಹಿಸುವವರ ವಿವರಣೆ ನೀಡಿದ ಡಾ. ಯೋಗೇಶ್ ಬಾಬು ಅವರು. ಡೀಸೆಲ್ ಪೆಟ್ರೋಲ್ ವಿರೋಧಿಸಿ ಭಾನುವಾರದಂದು ಸೈಕಲ್ ಜಾಥ ನಡೆಸಲಾಗುವುದು ಎಂದೂ ಕಾಂಗ್ರೆಸ್ ಮುಖಂಡ ಡಾ. ಯೋಗೀಶ್ ಬಾಬು ತಿಳಿಸಿದರು. ಮೊಳಕಾಲ್ಮುರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಿನೇ ದಿನೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಾಗುತ್ತಿದ್ದೂ ಜನಸಾಮಾನ್ಯರ ಮೇಲೆ ಪರಿಣಾಮ ಬಿರುತ್ತಿದೆ. ಇಂಧನಗಳ ವಿಪರೀತ ಬೆಲೆ ಏರಿಕೆಯನ್ನು ವಿರೋಧಿಸಿ ಕೆಪಿಸಿಸಿ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಪಟ್ಟಣದ ಪಿಟಿ ಹಟ್ಟಿಯಿಂದ ಖಾಸಗಿ ಬಸ್ ನಿಲ್ದಾಣದವರೆಗೂ ಸೈಕಲ್ ಜಾಥಾ ಮಾಡಲಾಗುತ್ತಿದ್ದು ಅಂದಿನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡರಾದ ವಿಎಸ್ ಉಗ್ರಪ್ಪ ಮಾಜಿ ಸಂಸದ ಬಿಎನ್ ಚಂದ್ರಪ್ಪ ಮಾಜಿ ಸಚಿವರಾದ ಹೆಚ್ ಆಂಜನೇಯ ಚಳ್ಳಕೆರೆ ಶಾಸಕ ರಘುಮೂರ್ತಿ ಮಾಜಿ ಶಾಸಕರಾದ ಗೋವಿಂದಪ್ಪ ಎಸ್ ತಿಪ್ಪೇಸ್ವಾಮಿ ಮಾಜಿ ಸಚಿವರಾದ ನಜೀರ್ ಅಹಮದ್ ಮಾಜಿ ವಿಧಾನ ಪರಿಷತ್ ಸದಸ್ಯರಾದ ಜಯಮ್ಮ ಬಾಲರಾಜ್ ಮಾಜಿ ಸಚಿವ ಡಿ ಸುಧಾಕರ್ ಚಿತ್ರದುರ್ಗ ಕೆಪಿಸಿಸಿ ಜಿಲ್ಲಾಧ್ಯಕ್ಷ ತಾಜ್ ಪಿರ್ ಸೇರಿದಂತೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಕರ್ತರು ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ತಾಲೂಕಿನ ಎಲ್ಲಾ ಕಾಂಗ್ರೆಸ್ ಮುಖಂಡರು ಭಾಗವಹಿಸುವರು ಎಂದು ತಿಳಿಸಿದರು…
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030