ಚಿತ್ರದುರ್ಗ: ಜಿಲ್ಲಾ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 13 ಪರೀಕ್ಷಾ ಕೇಂದ್ರಗಳ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು ಕರ್ನಾಟಕ ಪರೀಕ್ಷಾ ಸುರಕ್ಷಾ ಪದ್ಧತಿ ಅನ್ವಯ ಕಟ್ಟುನಿಟ್ಟಿನ ಭದ್ರತೆ ಅಭಿಯಾನ ಅಡಿಯಲ್ಲಿ ಪರೀಕ್ಷೆ ಸರಾಗವಾಗಿ ನಡೆದಿದೆ.ತಾಲೂಕಿನಲ್ಲಿ 13 ಕೇಂದ್ರಗಳ ಶಾಂತಿಯುತವಾಗಿ ಪರೀಕ್ಷೆ ನಡೆದಿದ್ದು ಯಾವುದೇ ನಕಲಿನ ಬಗ್ಗೆ ಕಂಡುಬಂದಿಲ್ಲ ಒಟ್ಟು 2160 ವಿದ್ಯಾರ್ಥಿಗಳ ಪೈಕೆ 2134 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗಿದ್ದರು. 26 ವಿದ್ಯಾರ್ಥಿಗಳು ಗಯಾರ್ ಆಗಿದ್ದಾರೆ. ಒಟ್ಟು ಮೂರು ಕೋರ್ ವಿಷಯಗಳಿಗೆ ಸಂಬಂಧಪಟ್ಟಿತ್ತು. 120 ಪ್ರಶ್ನೆಗಳು ಉಳ್ಳ ಒಂದೇ ಪ್ರಶ್ನೆ ಪತ್ರಿಕೆ ನೀಡಲಾಗಿತ್ತು. ಭಾಗ-1 ಗಣಿತ, ಭಾಗ-2 ವಿಜ್ಞಾನ, ಭಾಗ-3 ಸಮಾಜ ವಿಜ್ಞಾನ, ಪ್ರಶ್ನೆ ಪತ್ರಿಕೆಯನ್ನು ಬರೆದಿದ್ದು ಒಟ್ಟು ಮೂರು ಗಂಟೆ ಸಮಯ ಅವಕಾಶ ನೀಡಲಾಗಿತ್ತು. ಪರೀಕ್ಷೆ ಹಾಜರಾಗಿದ್ದ ಪ್ರತಿಯೊಬ್ಬ ವಿದ್ಯಾರ್ಥಿಯೂ ತರ್ಮಲ್ ಸ್ಕ್ಯಾನಿಂಗ್ ಸ್ಯಾನಿಟೈಸರ್ ನಿಯಮಗಳನ್ನು ಪಾಲಿಸುತ್ತಾ ಯಾವುದೇ ಆತಂಕ ಘಟನೆಗಳು ಇಲ್ಲದೆ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಯಿತು..
ವರದಿ.ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030