ಇವತ್ತು ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟದ ಸಭೆ ಕರಿಯಲಾಗಿತ್ತು.
ಬೆಳಗಾವಿ ಜಿಲ್ಲೆಯ ವಿವಿಧ ಸಂಘಟನೆಯ ಅಧ್ಯಕ್ಷರು, ಬೆಳಗಾವಿ ಜಿಲ್ಲಾ ಮಾದಿಗ ಮುಖಂಡರನ್ನು ಒಳಗೊಂಡಂತೆ ಸಭೆ ನಡೆಸಲಾಯಿತ್ತು.
ಡಿಸೆಂಬರ್ ತಿಂಗಳಿನಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶ ನಡೆಯುತ್ತಿದ್ದು ಈ ಅಧಿವೇಶನದಲ್ಲಿ ನ್ಯಾ ನಾಗಮೋಹನ ದಾಸ್ ಆಯೋಗದ ವರದಿ ಆಧಾರದಂತೆ ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಶೇಕಡಾ ೨% ಹೆಚ್ಚಿಸಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡುವಂತೆ ಮಾದಿಗ ಸಂಘಟನೆಗಳ ಒಕ್ಕೂಟದ ಅಡಿಯಲ್ಲಿ ನವೆಂಬರ್ ತಿಂಗಳಿನಲ್ಲಿ ಮಾದಿಗರ ಬೃಹತ್ ಬೈಕ್ ಜಾಥಾ ಹಮ್ಮಿಕೊಳ್ಳುತ್ತಿದ್ದು ಈ ವಿಷಯದ ಕುರಿತಾಗಿ ಬೆಳಗಾವಿಯಲ್ಲಿ ಮೊದಲನೇ ಸಭೆ ಯಶಸ್ವಿಯಾಗಿ ನಡೆಯಿತು. ಈ ಸಭೆಯ ಅಧ್ಯಕ್ಷತೆ ಶ್ರೀ ಮುತ್ತಣ ಬೆಣ್ಣೂರು ( ಹಿರಿಯ ಹೋರಾಟಗಾರರು ಬಾಗಲಕೋಟ) ಮತ್ತು ಸಭೆಯ ನೇತೃತ್ವ ವಹಿಸಿದ ಜಿಲ್ಲಾ ಮುಖಂಡರಾದ ಶ್ರೀ ಎನ್. ಪ್ರಶಾಂತರಾವ್ ಐಹೊಳೆ, ಚಂದ್ರಕಾಂತ್ ಕಾದ್ರೋಳ್ಳಿ ( ರಾಜ್ಯಾಧ್ಯಕ್ಷರು ಡಿ.ಎಸ್.ಎಸ್), ಶ್ರೀ ರಮೇಶ ಮಾದರ ಜಿಲ್ಲಾ ಮಾದಿಗ ಮುಖಂಡರು, ಶ್ರೀ ಶಂಕರ ಪೂಜಾರಿ (ರಾಜ್ಯಾಧ್ಯಕ್ಷರು ಕರ್ನಾಟಕ ಪ್ರದೇಶ ಮಾದಿಗರ ಸಂಘ) ಶ್ರೀ ರಮೇಶ ರಾಯಪ್ಪಗೋಳ (ಜಿಲ್ಲಾ ಮಾದಿಗ ಮುಖಂಡರು) ಹಾಗೂ ಈ ಬೃಹತ್ ಬೈಕ್ ಜಾಥಾ ರೂವಾಗಿಗಳಾದ ಶ್ರೀ ಅಜಿತ ಮಾದರ ( ಯುವ ಹೋರಾಟಗಾರರು), ಶ್ರೀ ಎಸ್.ಆರ್.ರಂಗನಾಥ (ಯುವ ಹೋರಾಟಗಾರರು) ಹಾಗೂ ಇನ್ನೂ ಹಲವಾರು ಜಿಲ್ಲಾ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿ ಎಲ್ಲರೂ ಒಮತ್ತದಿಂದ ಹೋರಾಟಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದರು.ಪ್ರಕಟಣೆ : ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟ ಬೆಂಗಳೂರು…
ವರದಿ. ಮಹಾಲಿಂಗ ಗಗ್ಗರಿ. ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030