ಚಿತ್ರದುರ್ಗದಲ್ಲಿ, ಕ.ರಾ.ರ.ಸಾ ನಿಗಮ ಚಿತ್ರದುರ್ಗ ಘಟಕ ವಿಭಾಗ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಶ್ರೀ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಹಾಗೂ KSRTC ಅಧ್ಯಕ್ಷ ಎಂ ಚಂದ್ರಪ್ಪ ಪಾಲ್ಗೊಂಡು. ಮಹರ್ಷಿ ವಾಲ್ಮೀಕಿರವರ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ಗೌರವ ಪೂರ್ವಕ ನಮನ ಸಲ್ಲಿಸಿದರು.
ಇದೇ ವೇಳೆಯಲ್ಲಿ ಮಾತನಾಡಿದ ಅವರು
ಪರಮ ಪವಿತ್ರವಾದ ರಾಮಾಯಣದ ಮೂಲಕ ಜೀವನ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿದ ಜಗತ್ತಿನ ಮೊದಲ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಮಹಾಕಾವ್ಯವಾದ ‘ರಾಮಾಯಣ’ವನ್ನು ಇಂದಿನ ಕಾಲಘಟ್ಟದಲ್ಲಿ ಹೆಚ್ಚು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ಕ.ರಾ.ರ.ಸಾ. ನಿಗಮ ನಿಯಂತ್ರಣ ಅಧಿಕಾರಿಗಳಾದ ಶ್ರೀ ಬಿ.ಜೆ. ಮಂಜುನಾಥ್, ಖ್ಯಾತ ಸಾಹಿತಿಗಳು ಕಾದಂಬರಿಗಾರರುದ ಶ್ರೀ ಬಿ.ಎಲ್. ವೇಣು, ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜು ಪ್ರಾಧ್ಯಾಪಕರಾದ ಶ್ರೀ ಕರಿಯಪ್ಪ ಮಾಳಗಿ, ರೈತ ಮುಖಂಡರಾದ ಶ್ರೀ ಭೂತಯ್ಯ, ಶ್ರೀ ಮಾಜಿ ನಗರಸಭಾ ಅಧ್ಯಕ್ಷರಾದ ಶ್ರೀ ಬಿ. ಕಾಂತರಾಜ್, ಶ್ರೀ ಸಿ.ಇ. ಶ್ರೀನಿವಾಸಮೂರ್ತಿ, ಶ್ರೀ ಜೆ.ಎಂ. ತಿಪೇಸ್ವಾಮಿ, ಶ್ರೀ ಎಸ್. ಎಸ್. ನಿರಂಜನಮೂರ್ತಿ, ಶ್ರೀ ಕೆ.ಎಚ್. ನಾಗರಾಜ್, ಸಾರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು…
ವರದಿ.ಸುರೇಶ್ ಚಿತ್ರದುರ್ಗ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030