ಸವದಿ ವಿರುದ್ಧ ಭೀಮಶಿ ಮಗದುಮ ಆರೋಪ
ರಬಕವಿ-ಬನಹಟ್ಟಿ:ಪಟ್ಟಣದ ಭದ್ರನವರ ಮಹಾದೇವ ಬಂಗಲೆಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ವಿರುದ್ಧ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪ ಮಾಡಿದರು. ಕ್ಷೇತ್ರದ ಪ್ರತಿ ಅಭಿವೃದ್ಧಿ ಕೆಲಸದಲ್ಲೂ ಗುತ್ತಿಗೆದಾರರಿಂದ ಲಂಚ ಕೇಳುತ್ತಿದ್ದು ಅಧಿಕಾರಿದಲ್ಲಿದ್ದಾಗ ಅಧಿಕಾರ ದುರ್ಬಳಕೆ ಮಾಡಿ ಕಾರ್ಯಕರ್ತರನ್ನು ತುಳಿಯುವ ಪ್ರಯತ್ನ ಮಾಡಿದ್ದಾರೆ. ಪಕ್ಷಕ್ಕೆ ನಿಷ್ಠೆಯಿದ್ದ ಮುಖಂಡರಿಗೆ ಅಪಮಾನ ಮಾಡಿ ಪಕ್ಷದಿಂದ ಉಚ್ಚಾಟನೆ ಮಾಡಲು ಯತ್ನಿಸಿದ್ದಾರೆ ಆದ್ದರಿಂದ ಎಲ್ಲ ಮುಖಂಡರು ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿದ್ದೇವೆ ಕ್ಷೇತ್ರದ್ಯಾಂತ ಈಗಾಗಲೇ ಕಾರ್ಯಕರ್ತರು ಸಹ ಪಕ್ಷ ಸೇರ್ಪಡೆ ಆಗುತ್ತಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ರಾಜೇಂದ್ರ ಭದ್ರನವರ,ಹರ್ಷವರ್ಧನ ಪಟವರ್ಧನ್, ಮತ್ತು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಇದ್ದರು.
ವರದಿ.
ಬಸವರಾಜ ನಂದೆಪ್ಪನವರ
ರಬಕವಿ-ಬನಹಟ್ಟಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030