ತೇರದಾಳದಲ್ಲಿ ಸ್ಮೃತಿ ಇರಾನಿ ಭರ್ಜರಿ ರೋಡ್ ಶೋ.
ತೇರದಾಳ:ಮತಕ್ಷೇತ್ರದ ತೇರದಾಳ ನಗರದಲ್ಲಿ ರವಿವಾರ ಭಾಜಪಾ ಪ್ರಬಲ ಅಭ್ಯರ್ಥಿ ಸಿದ್ದು ಸವದಿ ಪರ ಪ್ರಚಾರಕ್ಕೆ ಆಗಮಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ನಗರದ ಪುರಸಭೆಯ ಹತ್ತಿರ ಇರುವ ಮೈದಾನಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಕೇಂದ್ರ ಸಚಿವರನ್ನು ಹೂಗುಚ್ಛ ಮತ್ತು ಅಲ್ಲಮಪ್ರಭು ಭಾವಚಿತ್ರ ನೀಡಿ ಸ್ವಾಗತಿಸಿದ ಬಿಜೆಪಿ ಮುಖಂಡರು. ಸಿದ್ಧೇಶ್ವರ ದೇವಸ್ಥಾನದಿಂದ ರೋಡ್ ಶೋ ಆರಂಭಿಸಿ ನಗರದ ಪ್ರಮುಖ ಬೀದಿಗಳಲ್ಲಿ ಹಾದು ಮಹಾವೀರ ವೃತ್ತವರೆಗೆ ಮೆರವಣಿಗೆ ಸಾಗಿತು. ಈಗಾಗಲೇ ಗೆಲುವಿನ ವಿಶ್ವಾಸದಲ್ಲಿ ಇರುವ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿಯವರ ಕ್ಷೇತ್ರದ್ಯಾಂತ ಪ್ರಾಚಾರ ಬಿರುಸುಗೊಂಡಿದೆ. ಸಾವಿರಾರು ಮಹಿಳಾ ಕಾರ್ಯಕರ್ತರು ಭಾಗವಹಿಸಿ ಪಾದಯಾತ್ರೆ ಮೂಲಕ ನಗರದಲ್ಲಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಪರ ಮತಯಾಚನೆ ಮಾಡಲಾಯಿತು. ಹರಿಯಾನದ ಕುರುಕ್ಷೇತ್ರ ಸಂಸದ ನಯಾಬ್ ಸಿಂಗ್ ಸೈನಿ ಮಾತನಾಡಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮತ್ತೆ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗುವುದು ಈಗಾಗಲೇ ಕ್ಷೇತ್ರದಲ್ಲಿ ರಸ್ತೆ ನಿರ್ಮಾಣ ಕಾರ್ಯ ವೇಗಗತಿಯಿದ್ದು ಎಲ್ಲ ರಸ್ತೆಗಳು ಸಹ ಡಾಂಬರೀಕರಣ ಗೊಂಡಿದ್ದು ತಮ್ಮ ಅಧಿಕಾರವಧಿಯಲ್ಲಿ ಅತೀ ಹೆಚ್ಚು ರಸ್ತೆ ನಿರ್ಮಾಣ ಕಾರ್ಯವಾಗಿದೆ ಆದ್ದರಿಂದ ತೇರದಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ರಸ್ತೆಗಳ ರಾಜ ಎಂದು ಜನ ಕರೆಯುತ್ತಿದ್ದರೆ ಪ್ರತಿಯೊಬ್ಬ ವ್ಯಕ್ತಿಯು ಸಹ ಸಿದ್ದು ಸವದಿಯವರು ಮತ್ತೆ ಅಧಿಕಾರಕ್ಕೆ ಬಂದು ಇನ್ನು ಹೆಚ್ಚಿನ ಅಭಿವೃದ್ಧಿ ಗೊಳಿಸಲಿ ಎಂದು ಆಶಿಸುತ್ತಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ಪರ ಒಲವಿದ್ದು ಭಾಜಪಾ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಆರಿಸಿ ತರುವುದರ ಮೂಲಕ ನರೇಂದ್ರ ಮೋದಿಯವರ ಕೈ ಬಲ ಪಡಿಸಬೇಕು ಎಂದು ಹೇಳಿದರು. ಇದೆ ಸಂದರ್ಭ ಅಭ್ಯರ್ಥಿ ಸಿದ್ದು ಸವದಿ ಪತ್ನಿ ಮಂಗಳಾ ಸವದಿ,ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಶಾಪೂರ,ಸುರೇಶ ಅಕ್ಕಿವಾಠ,ಲಕ್ಕಪ್ಪ ಪಾಟೀಲ್,ವಿದ್ಯಾಧರ ಸವದಿ,ಧರೆಪ್ಪ ಉಳ್ಳಾಗಡ್ಡಿ ಮತ್ತು ಬಿಜೆಪಿ ಮುಖಂಡರು ಸಾವಿರಾರು ಕಾರ್ಯಕರ್ತರುಜೋತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ.
ಬಸವರಾಜ ನಂದೆಪ್ಪನವರ
ತೇರದಾಳ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030