ಪದ್ಮಜೀತ ನಾಡಗೌಡ ಬಿರುಸಿನ ಪ್ರಚಾರ…!!!

Listen to this article

ಪದ್ಮಜೀತ ನಾಡಗೌಡ ಬಿರುಸಿನ ಪ್ರಚಾರ

ಮಹಾಲಿಂಗಪುರ: ಸಮೀಪದ ಸಂಗಾನಟ್ಟಿ,ಮಧಾಭಾವಿ ಗ್ರಾಮದಲ್ಲಿ ಪಕ್ಷೇತ್ರ ಅಭ್ಯರ್ಥಿ ಪದ್ಮಜೀತ ನಾಡಗೌಡ ತಮ್ಮ ಬೆಂಬಲಿಗರೊಂದಿಗೆ ಪ್ರಚಾರ ನಡೆಸಿದರು. ಕಾಂಗ್ರೆಸ್ ಟಿಕೆಟ್ ವಂಚಿತರಾಗಿ ಸ್ವಾಭಿಮಾನಿ ಜೋಡೆತ್ತು ಎಂದು ಗುರುತಿಸಿಕೊಂಡ ಡಾ. ಎ.ಆರ್.ಬೆಳಗಲಿ ಮತ್ತು ಪದ್ಮಜೀತ ನಾಡಗೌಡ ಪಕ್ಷೇತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಡಾ.ಬೆಳಗಲಿ ಸಹ ನಾಡಗೌಡ ಅವರಿಗೆ ಬೆಂಬಲ ನೀಡಿ ಪ್ರಚಾರ ಆರಂಸಿದ್ದಾರೆ. ಮಹಾಲಿಂಗಪುರದ ಸುತ್ತಲಿನ ಹಳ್ಳಿಗಳಾದ ಮದಬಾವಿ, ಮಾರಾಪುರ,ಸಂಗಾನಟ್ಟಿ ಗ್ರಾಮದ ದೇವಸ್ಥಾನಗಳಿಗೆ ಬೇಟಿ ನೀಡಿ ಪ್ರತಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಈಗಾಗಲೇ ಕೋರೋನಾ ಸಮಯದಲ್ಲಿ ಬಡವರಿಗೆ ದಿನಸಿ ಕಿಟ್ಟ,ತರಕಾರಿ ನೀಡಿ ಸಹಾಯ ಹಸ್ತ ತೋರಿ ಮನೆಮಾತಾಗಿದ್ದ ನಾಡಗೌಡ ಬಡವರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿ ಹಲವಾರು ಜನರ ಕಣ್ಣಿನ ಸಮಸ್ಯೆಕ್ಕೆ ಮುಕ್ತಿ ನೀಡಿ ತಮ್ಮ ವೈದ್ಯಕೀಯ ಜೀವದಲ್ಲಿ ಮಾನವಿಯತೆ ಮೆರೆದಿದ್ದ ವ್ಯಕ್ತಿ. ಕಾಂಗ್ರೆಸ್ ಟಿಕೆಟ್ ಸಿಗದಿದ್ದರು ಎದೆಗುಂದದೆ ಪಕ್ಷೇತ್ರವಾಗಿ ಸ್ಪರ್ಧಿಸಿ ಜನರ ಸೇವೆ ಮಾಡುವ
ಆಶಾಭಾವನೆ ಇಟ್ಟುಕೊಂಡಿದ್ದಾರೆ. ಪದ್ಮಜೀತ ನಾಡಗೌಡ ಸ್ಥಳೀಯರಾಗಿದ್ದು ದಲಿತ ಹಿಂದುಳಿದ ಜನರು ಸರ್ಕಾರ ಸೌಲಭ್ಯ ಪಡೆದು ಮುಂದೆ ಬರಬೇಕೆನ್ನುವ ವ್ಯಕ್ತಿ ಆಗಿದ್ದರಿಂದ ಅವರ ಬೆಂಬಲಿಗರು ತೇರದಾಳ ಮತಕ್ಷೇತ್ರದ ಜನತೆ ತಮ್ಮ ಮತವನ್ನು ಡಾ. ನಾಡಗೌಡರಿಗೆ ನೀಡಿ ಬಹುಮತದಿಂದ ಆರಿಸಿ ತರಬೇಕು ಎಂದು ಮನವಿ ಮಾಡಿದರು. ಅದರಂತೆ ಅವರ ಧರ್ಮಪತ್ನಿ ಸಹ ಪ್ರಚಾರ ಆರಂಬಿಸಿ ಹಣ್ಣಿನ ಬುಟ್ಟಿಗೆ ಮತ ನೀಡಬೇಕೆಂದು ಮತಯಾಚನೆ ಮಾಡುತ್ತಿದ್ದಾರೆ. ಜೋಡೆತ್ತುಗಳ ಬಿರುಸಿನ ಪ್ರಚಾರಕ್ಕೆ ರಾಷ್ಟ್ರೀಯ ಪ್ರಾದೇಶಿಕ ಪಕ್ಷಗಳಿಗೆ ತಮ್ಮ ಅಭ್ಯರ್ಥಿ ನೇರವಾಗಿ ಸ್ಪರ್ಧೆ ನೀಡಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಸಾಗರ ಚವಾಜ ಪದ್ಮಜೀತ ನಾಡಗೌಡ ಡಾ. ಎ.ಆರ್. ಬೆಳಗಲಿಯವರ ಬೆಂಬಲಿಗರು ಇದ್ದರು.


ವರದಿ.ಬಸವರಾಜ್ ನಂದೇಪ್ಪನವರು ಮಹಾಲಿಂಗಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend