ಚಿತ್ರದುರ್ಗ: ನಾಯಕನಹಟ್ಟಿ: ಇಂದು (ಜು,27) ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯ ಸಂಭವ ಹಿನ್ನೆಲೆ ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಈಗಾಗಲೇ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ ಆದರೂ ಸಾರ್ವಜನಿಕರು. ಕೋವಿಡ್ ಪ್ರಕರಣಗಳು ಕಡಿಮೆ ಆಗಿರುವ ಪರಿಣಾಮ ಸಾರ್ವಜನಿಕರು ಮೂರನೇ ಅಲೆಯನ್ನು ಮರೆತು ಮಾಸ್ಕ್ ಹಾಕದ ರಸ್ತೆಯಲ್ಲಿ ಮತ್ತು ಸಾರ್ವಜನಕ ಪ್ರದೇಶದಲ್ಲಿ ಓಡಾಡುತ್ತಿದ್ದರು. ತಹಶೀಲ್ದರ್ ಎನ್.ರಘುಮೂರ್ತಿ ಸಾರ್ವಜನಿಕರಿಗೆ ಕೋವಿಡ್ ಇನ್ನು ಸಂಪೂರ್ಣ ಹೋಗಿಲ್ಲ. ದಯಮಾಡಿ ಎಲ್ಲಾರೂ ಮಾಸ್ಕ್ ಹಾಕಿಕೊಳ್ಳಿ ಎಂದು ತಿಳಿ ಹೇಳಿದರು. ಮಾಸ್ಕ್ ಜಾಗೃತಿ ಜಾಥ್ ದಲ್ಲಿ ಸಬ್ ಇನ್ಸ್ಪೆಕ್ಟರ್ ಮಹೇಶ್ ಲಕ್ಷ್ಮಣ ಹೊಸಪೇಟೆ, ಹಾಗೂ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎನ್ ಟಿ ಕೋಡಿ ಭೀಮರಾಯ, ಪಟ್ಟಣ ಪಂಚಾಯತಿ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು..
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030