5.29 ಕೆ.ಜಿ ಚಿನ್ನಾಭರಣ ಹಾಗೂ 6.80 ಲಕ್ಷ ಹಣ ವಶ
ಚಿತ್ರದುರ್ಗ:ಹಿರಿಯೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬುಧವಾರ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 5.29 ಕೆ.ಜಿ. ಚಿನ್ನಾಭರಣ ಹಾಗೂ 6.80 ಲಕ್ಷ ಹಣವನ್ನು ಸಂಚಾರಿ ಕಣ್ಗಾವಲು ತಂಡದಿಂದ ವಶ ಪಡಿಸಿಕೊಳ್ಳಲಾಗಿದೆ.
ದಾವಣಗೆರೆ ಪಿ.ಮನೋಜ್ ಎಂಬುವರನ್ನು ಹಿರಿಯೂರು ಪಟ್ಟಣದಲ್ಲಿ ತಪಾಸಣೆಗೆ ಒಳಪಡಿಸಲಾದ ಸಂದರ್ಭದಲ್ಲಿ 5396 ಗ್ರಾಂ ಚಿನ್ನಾಭರಣಗಳು ಪತ್ತೆಯಾಗಿವೆ. ಮನೋಜ್ ಅವರು ಹಿರಿಯೂರು ಪಟ್ಟಣ ಚಿನ್ನಾಭರಣದ ಅಂಗಡಿಗಳಿಗೆ ಆಭರಣ ನೀಡಲು ತಂದಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ. ಆದರೆ ಯಾವುದೇ ಸೂಕ್ತ ರಸೀದಿ, ದಾಖಲೆಗಳು ಇಲ್ಲದ ಕಾರಣ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ಆಭರಣಗಳ ಮೊತ್ತ ರೂ.3.55 ಕೋಟಿ ಎಂದು ಅಂದಾಜಿಸಲಾಗಿದೆ. ವಶಪಡಿಸಿಕೊಂಡ ಪೋಲೀಸರು ತಾಲೂಕು ಖಜಾನೆಗೆ ಒಪ್ಪಿಸಿದ್ದಾರೆ. ಹಿರಿಯೂರು ಸಮೀಪದ ಮಸ್ಕಲ್ ಬಳಿ ಆಂದ್ರಪ್ರದೇಶದ ನಂದ್ಯಾಲ ಜಿಲ್ಲೆಯ ಜಿ.ಎಚ್.ಮೂರ್ತಿ ಎಂಬವರಿಂದ ಸರಿಯಾದ ದಾಖಲೆ ಇಲ್ಲದ 6.80 ಲಕ್ಷ ಜಪ್ತು ಮಾಡಲಾಗಿದೆ.
ಚುನಾವಣೆ ಮಾದರಿ ನೀತಿ ಸಂಹಿತೆ ಹಿನ್ನಲೆಯಲ್ಲಿ ತಾಲ್ಲೂಕಿನ ಚೆಕ್ ಪೋಸ್ಟಗಳಲ್ಲಿ ಹದ್ದಿನ ಕಣ್ಣು ಹಿಡಲಾಗಿದೆ ಎಂದು ಹಿರಿಯೂರು ತಹಶೀಲ್ದಾರ್ ರಾಜೇಶ್ಕುಮಾರ್ ತಿಳಿಸಿದ್ದಾರೆ…
ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030