ಭದ್ರಾ ಮೇಲ್ದಂಡೆ ಯೋಜನೆ : ಮುಖ್ಯ ಇಂಜಿನಿಯರ್ ಆಗಿ ಕೆ.ಎಂ. ಶಿವಪ್ರಕಾಶ್ ಅಧಿಕಾರ
ಚಿತ್ರದುರ್ಗ ಭದ್ರಾ ಮೇಲ್ದಂಡೆ ಯೋಜನಾ ವಲಯದ ಮುಖ್ಯ ಇಂಜಿನಿಯರ್ ಹುದ್ದೆಯ ಸ್ವತಂತ್ರ ಪ್ರಭಾರವನ್ನು ಕೆ.ಎಂ. ಶಿವಪ್ರಕಾಶ್ ಶುಕ್ರವಾರ ಭದ್ರಾ ಮೇಲ್ದಂಡೆ ಯೋಜನಾ ವಲಯದ ಕಚೇರಿಯಲ್ಲಿ ವಹಿಸಿಕೊಂಡರು.
ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ, ಚಿತ್ರದುರ್ಗದ ಭದ್ರಾ ಮೇಲ್ದಂಡೆ ಯೋಜನಾ ವೃತ್ತದಲ್ಲಿ ಅಧೀಕ್ಷಕ ಅಭಿಯಂತರರಾಗಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಮುಖ್ಯ ಇಂಜಿನಿಯರ್ ಆಗಿ ಹೆಚ್ಚುವರಿ ಪ್ರಭಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ಎಂ. ಶಿವಪ್ರಕಾಶ್ ಅವರಿಗೆ ಸರ್ಕಾರವು ಭದ್ರಾ ಮೇಲ್ದಂಡೆ ಯೋಜನಾ ವಲಯದ ಮುಖ್ಯ ಇಂಜಿನಿಯರ್ ಹುದ್ದೆಯ ಸ್ವತಂತ್ರ ಪ್ರಭಾರ ವಹಿಸಿ ಅಧಿಸೂಚನೆ ಹೊರಡಿಸಿದ್ದು, ಇದರನ್ವಯ ಕೆ.ಎಂ. ಶಿವಪ್ರಕಾಶ್ ಅವರು ಶುಕ್ರವಾರದಂದು ಭದ್ರಾ ಮೇಲ್ದಂಡೆ ಯೋಜನಾ ವಲಯದ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು…
ವರದಿ. ಪ್ರದೀಪ್, ಎಚ್, ಹಾವಿನಹಟ್ಟಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030