ವೀರೇಂದ್ರ ಪಪ್ಪಿ ಶಾಸಕನಾಗಿ ಆಯ್ಕೆಯಾದ ನಂತರ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಮೊದಲ ಬಾರಿಗೆ ಸಾರ್ವಜನಿಕ ಭೇಟಿ ನೀಡಿ ಆಸ್ಪತ್ರೆಯ ಸ್ಥಿತಿ-ಗತಿಯನ್ನು ಪರಿಶೀಲಿಸಿದರು.
ವಿವಿಧ ವಾರ್ಡುಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ಸ್ಥಿತಿಯನ್ನು ವಿಚಾರಿಸಿ ಅವರಿಗೆ ದೊರಕಿರುವ ಸೌಲಭ್ಯ ಗಳು ಹಾಗೂ ಅನುಭವಕ್ಕೆ ಬಂದಿರುವ ಕುಂದುಕೊರತೆಗಳನ್ನು ಆಲಿಸಿದೆ. ಜೊತೆಗೆ ವಿವಿಧ ಚಿಕಿತ್ಸಾ ಘಟಕಗಳ ಮೂಲ ಸೌಕರ್ಯಗಳ ಸ್ಥಿತಿಯನ್ನು ಪರಿಶೀಲಿಸಿ ನಂತರ ಜಿಲ್ಲಾಸ್ಪತ್ರೆಯ ನಿರ್ದೇಶಕರು ಹಾಗೂ ಆಡಳಿತ ಸಿಬ್ಬಂಧಿಯೊಂದಿಗೆ ಸಂವಾದ ನಡೆಸಿದರು.ಹಾಗೂ ವೈದ್ಯ ರಿಗೆ ಬೇರೆ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಕಳಿಸದೇ ಎಲ್ಲಾ ವಿಧದ ರೋಗಿಗಳನ್ನು ಎಲ್ಲಿಯೇ ಚಿಕಿತ್ಸೆಯನ್ನು ನೀಡಿ ಗುಣಮಾಡಿ ಎಂದು ವೈದ್ಯರಿಗೆ ತಿಳಿಸಿದರು.
ಈ ಭೇಟಿಯ ಸಂದರ್ಭದಲ್ಲಿ ಸಾಕಷ್ಟು ಮೂಲ ಸೌಕರ್ಯಗಳ ಕೊರತೆಯನ್ನು ರೋಗಿಗಳು ಎದುರಿಸುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಇದನ್ನು ಸರಿಪಡಿಸುವ ಜೊತೆಗೆ ನಮ್ಮ ಜಿಲ್ಲೆಯ ಜನರ ಪ್ರಮುಖ ಆಸ್ಪತ್ರೆಯ ಸ್ವರೂಪವನ್ನೇ ಬದಲಿಸುವ ಮೂಲಕ ಜನರಿಗೆ ಉತ್ತಮ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ದೊರೆಯುವಂತೆ ಮಾಡುತ್ತೇನೆ ಎಂಬ ಮಾತನ್ನು ನನ್ನ ಕ್ಷೇತ್ರದ ಜನರಿಗೆ ನೀಡುತ್ತೇನೆ ಎಂದು ತಿಳಿಸಿದರು…
ವರದಿ. ಶಶಿಕುಮಾರ್, ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030