ಚಳ್ಳಕೆರೆ: ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಿ ಎಂದು ಶಾಸಕ ಟಿ. ರಘುಮೂರ್ತಿ…!!!

Listen to this article

ಚಳ್ಳಕೆರೆ: ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಿ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು. ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಬಗರ್ ಹುಕುಂ ಕಮಿಟಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಕಮಿಟಿ ರಚನೆ ಮಾಡದೆ ಫಲಾನುಭವಿಗಳು ಸಂಕಷ್ಟ ಅನುಭವಿಸುವಂತಾಗಿತ್ತು. ಈಗ ಸಮಿತಿ ರಚನೆ ಆಗಿದ್ದು, ಅಧಿಕಾರಿಗಳು ಇರುವ ಕಾಲಾವಕಾಶದೊಳಗೆ ದೀನದಲಿತರು ಹಾಗೂ ಜಮೀನು ರಹಿತ ಬಡವರನ್ನು ಗುರುತಿಸಿ ಅವರಿಗೆ ಸಾಗುವಳಿ ಚೀಟಿ ನೀಡಬೇಕು ಎಂದರು. ನಂತರ ತಹಶೀಲ್ದಾರ್ ಎನ್. ರಘುಮೂರ್ತಿ ಮಾತನಾಡಿ, ತಾಲೂಕಿನಲ್ಲಿ ಈವರೆಗೆ ಹುಟ್ಟು-ಸಾವು 1009 ಅರ್ಜಿಗಳು ಕಚೇರಿಗೆ ಸಲ್ಲಿಕೆಯಾಗಿದ್ದು,316 ಅರ್ಜಿಗಳು ಕಳೆದ ಕೆಲವು ವರ್ಷಗಳಿಂದ ವಿಲೇವಾರಿಯಾಗದೇ ಉಳಿದಿವೆ. 1325 ಅರ್ಜಿಗಳು ಕಚೇರಿಯಲ್ಲಿ ಬಾಕಿ ಇದ್ದು, ಮುಂದಿನ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಒಬ್ಬ ಫಲಾನುಭವಿಗೆ 4 ಎಕರೆ 30 ಗುಂಟೆ ಜಮೀನಿಗೆ ಸಾಗುವಳಿ ಚೀಟಿ ನೀಡಲು ಅವಕಾಶವಿದೆ. ಒಂದು ವೇಳೆ, ಅರ್ಜಿ ಸಲ್ಲಿಸಿರುವ ಪಲಾನುಭವಿಗಳಲ್ಲಿ ಯಾರಾದರೂ, ಈಗಾಗಲೇ,ಭೂಮಿ ಹೊಂದಿದ್ದರೆ ಅಂತಹ ಫಲಾನುಭವಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದರು. ಇದೇ ವೇಳೆ ಬಗರ್ ಹುಕ್ಕು ಕಮಿಟಿ ಸದಸ್ಯರಾದ ಆರ್.ಡಿ.ಮಂಜುನಾಥ್,ರಂಜಿತಾ,ಶ್ರೀಕಂಠಪ್ಪ, ಶಿರಸ್ತೇದಾ ರ್,ಸದಾಶಿವಪ್ಪ, ಕಂದಾಯಾಧಿಕಾರಿ ಲಿಂಗೇಗೌಡ ಸೇರಿದಂತೆ, ಗ್ರಾಮಲೆಕ್ಕಾಧಿಕಾರಿಗಳು ಇದ್ದರು…

ವರದಿ. ಶಶಿಕುಮಾರ್ ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend