ರೈತರ ಪಾಲಿನ ದೇವರು ಭ್ರಷ್ಟಾರಿಗೆ ಸಿಂಹ ಸ್ವಪ್ನವಾದ ಚಳ್ಳಕೆರೆ ತಹಸೀಲ್ದಾರ್ ಏನ್ ರಘುಮೂರ್ತಿ
ಚಳ್ಳಕೆರೆಯಲ್ಲಿ ಕ್ರಿಯಾಶೀಲವಾಗಿ ಚುರುಕಿನಿಂದ ಯಾವಾಗಲು ಜನಸೇವೆಗೆ ಆದ್ಯತೆ ಕೊಡುವ ಈ ತಹಸೀಲ್ದಾರ್ ಚಳ್ಳಕೆರೆ ಗೆ ಆಗಮಿಸಿ ಸ್ವಲ್ಪ ಸಮಯದಲ್ಲೇ ಹೆಸರು ಮಾಡಿದಂತಹ ವ್ಯಕ್ತಿಯಲ್ಲಿ ಇವರು ಒಬ್ಬರು ರೈತರು ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಅವರಿಗೆ ಸಮಯವನ್ನು ಮಿಸಾಲಿಟ್ಟು ಅವರ ನೋವು ಸಮಸ್ಯೆಗೆ ಸ್ಥಳದಲ್ಲಿಯೇ ಕ್ರಮ ಕೈಗೊಂಡು ಪರಿಹಾರಿಸಿ ಮತ್ತು ಅವರಿಗೆ ಸಲಹೆ ಕೊಟ್ಟು ಸಮಸ್ಯೆಯನ್ನು ಇತ್ಯಾರ್ಥ ಮಾಡಿ ಕಳಿಸುತ್ತಾರೆ. ಹಾಗೆಯೇ ಕೋವಿಡ್ 19 ಇದ್ದು ಇದರ ಬಗ್ಗೆ ಸಾರ್ವಜನಿಕ ರಲ್ಲಿ ಅರಿವನ್ನು ಮೂಡಿಸುವ ಕಾರ್ಯ ತಾವೇ ಸ್ವತ ಮಾಸ್ಕ್ ಗಳನ್ನು ಜನರಿಗೆ ನೀಡಿ ಅವರಲ್ಲಿ ಇ ರೋಗದ ಬಗ್ಗೆ ಅರಿವನ್ನು ಮೂಡಿಸುತ್ತಿದ್ದಾರೆ. ಹಾಗೆಯೇ ಗ್ರಾಮ ಪಂಚಾಯಿತಿ ಗಳಲ್ಲಿ ವೈದ್ಯರ ಜೊತೆಗೂಡಿ ಕೊರೋನ ಎಂಜೆಕ್ಷನ್ ಗಳನ್ನು ಮಾಡಿಸದಿರುವ ಜನರಿಗೆ ಅದರ ಬಗ್ಗೆ ಅರಿವನ್ನು ಮೂಡಿಸಿ ಅವರಿಗೆ ಲಸಿಕೆಯನ್ನು ನೀಡಿಸುವ ಕಾರ್ಯ ಮಾಡುತ್ತಿದ್ದಾರೆ. ಕಾಲೇಜುಗಳಿಗೆ ಭೇಟಿಮಾಡಿ ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸುವ ಕಾರ್ಯ. ಕಾನೂನಿನ ಬಗ್ಗೆ ಜ್ಞಾನ ಇ ತರಹದ ಕಾರ್ಯವನ್ನು ನಗರದ ತಹಸೀಲ್ದಾರ್ ಏನ್ ರಘುಮೂರ್ತಿ ಮಾಡುತ್ತಿರುವುದು ಜನರಲ್ಲಿ ಸಂತಸ ತಂದಿದೆ. ಜನರು ತಾಲ್ಲೂಕು ಕಚೇರಿಗೆ ಅಲೆದಾಡುವ ಸಂದರ್ಭದಲ್ಲಿ ಇಂತಹ ತಹಸೀಲ್ದಾರ್ ರಿಂದ ಕಚೇರಿಯ ಕೆಲಸಗಳು ಬೇಗ ಬೇಗನೆ ಆಗುತ್ತಿರುವುದು ಜನರಲ್ಲಿ ಸಂತೋಷ ಮೂಡಿಸಿದೆ. ತಾಲೂಕು ಕಚೇರಿಯ ಸಿಬ್ಬಂದಿಗಳು ಮೊದಲು ಅರ್ಜಿಗಳು ನಿಧಾನವಾಗಿ ಮಾಡುತ್ತಿದ್ದರು. ಈ ತಹಸೀಲ್ದಾರ್ ರವರಿಂದ ಎಲ್ಲ ಕೆಲಸ ಬೇಗ ಆಗುತ್ತಿವೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಜನ ಸಾಮಾನ್ಯರಂತೆ ಇರುವ ನಮ್ಮ ಈ ತಹಸೀಲ್ದಾರ್ ಜನರಿಗೆ ಜನರ ಸಮಸ್ಯೆಗೆ ಬೇಗ ಸ್ಪಂದಿಸುವ ವ್ಯಕ್ತಿ ಇವರಗಿದ್ದಾರೆ …
ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030