ಸಮತಾ ರೆಸಾರ್ಟ್ ನಲ್ಲಿ ಹುಟ್ಟುಹಬ್ಬ,ಆಚರಿಸಿಕೊಂಡ ಬಿಜೆಪಿ,ಮುಖಂಡ,ಸೂರ್ಯಪಾಪಣ್ಣ
ಗುಡೇಕೋಟೆ :- ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಸಮೀಪದ ರಾಮದುರ್ಗ ಗ್ರಾಮದ ಮುಖಂಡರಾದ ವಿಜಯನಗರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸೂರ್ಯ ಪಾಪಣ್ಣ ನವರು ಜಿಲ್ಲೆಯ ಹರಪನಹಳ್ಳಿ ಹೊರವಲಯದಲ್ಲಿರುವ ಖಾಸಗಿ ಸಮತಾ ರೆಸಾರ್ಟ್ನಲ್ಲಿ ತಮ್ಮ 48 ನೇ ಹುಟ್ಟುಹಬ್ಬವನ್ನು ಚಲನಚಿತ್ರ ನಟ ಓಬಿಸಿ ಮೊರ್ಚ್ ರಾಜ್ಯಾಧ್ಯಕ್ಷರಾದ ನೆ.ಲ.ನರೇಂದ್ರ ಬಾಬು ರವರ ಸಮ್ಮುಖದಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
ಸಂಘಟನಾ ಚತುರ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರ್ಯ ಪಾಪಣ್ಣ ನವರು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಸ್ಥಳಿಯ,ನಿಷ್ಠಾವಂತ ಬಿಜೆಪಿ ಮುಂದಾಳುಗಳಾಗಿದ್ದು. ಅನೇಕ ಸಂಘಟನೆ, ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡವರಾಗಿರುತ್ತಾರೆ ,ಒಂದು ಕಾಲದಲ್ಲಿ ಈ ಭಾಗದ ಪ್ರಭಾವಿ
ನಾಯಕರಾಗಿದ್ದ ದಿವಂಗತ ಗಂಡುಗಲಿ ಬಂಡಿ ಸೂರಯ್ಯ ನವರ ಸುಪುತ್ರರಾಗಿರುವ ಸೂರ್ಯ ಪಾಪಣ್ಣ ನವರು ಕಾಲೇಜು,ವಿದ್ಯಾರ್ಥಿಯಾಗಿದ್ದಾಗನಿಂದಲೂ ತಂದೆಯವರ ಮಾರ್ಗದರ್ಶನದಲ್ಲಿ ಬೆಳೆದು ನಿಂತು.
ಈಗಿನ ಸಾರಿಗೆ ಸಚಿವರಾದ ಬಿ.ಶ್ರೀರಾಮುಲು ಹಾಗೂ ಮಾಜಿ ಸಚಿವರಾದ ಜಿ.ಜನಾರ್ಧನ ರೆಡ್ಡಿ.ಹಾಲಿಸಚಿವರಾದ ವಿಜಯನಗರ ಜಿಲ್ಲೆಯ ರುವಾರಿ ಆನಂದ್ ಸಿಂಗ್.ಕೂಡ್ಲಿಗಿ ಶಾಸಕರಾದ ಎನ್ ವೈ ಗೋಪಾಲಕೃಷ್ಣ.ವಿಜಯನಗರ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ರವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಭಾರತೀಯ ಜನತಾ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಬಿಜೆಪಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ಪಕ್ಷದ ಸಂಘಟನೆಯಲ್ಲಿ ತೊಡಗಿಸಿ ಕೊಂಡವರಾಗಿದ್ದಾರೆ.
ರಾಜ್ಯದ ವಿವಿಧ ಪಕ್ಷಗಳ ಆದಿಯಾಗಿ ಬಹುತೇಕ ಎಲ್ಲಾ ಬಿಜೆಪಿ ನಾಯಕರೊಂದಿಗೆ ಉತ್ತಮ ಭಾದವ್ಯ ಉಳಿಸಿಕೊಂಡಿರುವ ಸೂರ್ಯ ಪಾಪಣ್ಣ ನವರು ಓರ್ವ ಕೊಡುಗೈ ದಾನಿಯಾಗಿರುತ್ತಾರೆ , ಸೂರ್ಯ ಪಾಪಣ್ಣ ನವರು ಆಗಸ್ಟ್ 10 ರಂದು ತಮ್ಮ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಹರಪನಹಳ್ಳಿ ಬಿಜೆಪಿ ಮುಖಂಡ ವಿಶ್ವಾಸ್ ರವರ ನೇತೃತ್ವದಲ್ಲಿ ಹೊರವಲಯದಲ್ಲಿರುವ ಖಾಸಗಿ ಸಮತಾ ರೆಸಾರ್ಟ್ನಲ್ಲಿ ಸರಳವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
ಈ ವೇಳೆಯಲ್ಲಿ ಅವರು ಪತ್ನಿ ಮಾಜಿ ತಾ ಪಂ ಸದಸ್ಯರಾದ ಸರೋಜಮ್ಮ ನವರ ಜೋತೆಗೂಡಿ ತನ್ನ ಮನೆ ದೇವರಿಗೆ ನಮಿಸಿ. ತಾಯಿಯವರಾದ ಕೊಟ್ಟೂರು ಎಪಿಎಂಸಿ ಮಾಜಿ ಅಧ್ಯಕ್ಷರು ಗಂಗಮ್ಮ ನವರ ಆಶೀರ್ವಾದ ಪಡೆದರು,ಬಿಜೆಪಿ ನಾಯಕರ ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ತನ್ನ ಹುಟ್ಟು ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿಕೊಂಡರು.
ಈ ಸಂಧರ್ಭದಲ್ಲಿ ಮಾಜಿ ರಾಜ್ಯಸಭಾ ಸದಸ್ಯರು.ಹಾಲಿ ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ನೆ.ಲ.ನರೇಂದ್ರಬಾಬು.ವಿಭಾಗದ ಪ್ರಭಾರಿಗಳಾದ ಸಿದ್ದೇಶ್ ಯಾದವ್. ಹರಪನಹಳ್ಳಿ ಶಾಸಕರಾದ ಜಿ.ಕರುಣಾಕರ ರೆಡ್ಡಿ ರವರ ಸುಪುತ್ರ ವಿಷ್ಣು ರೆಡ್ಡಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕೆ.ಎಸ್.ಮಹಿಳಾ ಮೋರ್ಚಾ ಜಿಲ್ಲಾಧಕ್ಷರಾದ ಡಾ,ಆರುಂಡಿ ಸುವರ್ಣಾನಾಗರಾಜ್.ಹರಪನಹಳ್ಳಿ ಪುರಸಭೆ ಅಧ್ಯಕ್ಷ ಹರಾಳ್ ಅಶೋಕ್.ಬಿಜೆಪಿ ಮುಖಂಡ ವಿಶ್ವಾಸ್ ಸೇರಿದಂತೆ ಪ್ರಮುಖ ಬಿಜೆಪಿ ಮುಖಂಡರು ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು….
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030