ಗುತ್ತಿಗೆದಾರರು ಗುತ್ತಿಗೆ ಆದೇಶದ ಮನದಂಡಗಳನ್ನು ನಿಯಮನುಸಾರವಾಗಿ ಪಾಲಿಸದೆ ನಿರ್ಲಕ್ಷಿಸಿರುವ ಕುರಿತು
ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕಿನ ನ್ಯಾಯಬೆಲೆ ಅಂಗಡಿಯ ಮಾಲೀಕರಾದ ಹಾಗೂ ಗಂಗಾವತಿ ತಾಲೂಕು ಅಧ್ಯಕ್ಷರಾದ ಕೆ ಮಂಜುನಾಥ್ ಅವರು ಮಾತನಾಡಿ ಗಂಗಾವತಿ ತಾಲೂಕು ಪಡಿತರ ಸಗಟು ಗೋದಮುನಿಂದ ನ್ಯಾಯಬೆಲೆ ಅಂಗಡಿಗೆ ಪಡಿತರ ಸಗಟು ಸರಬರಾಜು ಮಾಡಲು ಗುತ್ತಿಗೆ ಪಡೆದ ಮಾಲೀಕರಾದ ಮಹಮದ್ ಹಾಜಿ ಗ್ಲೋಬಲ್ ರಾಯಚೂರು ಇವರು ಟೆಂಡರ್ ಪಡೆದಿರುತ್ತಾರೆ. ಆದರೆ ನಮ್ಮ ಗಂಗಾವತಿ KFCSC ಗೋಧಾಮುನಲ್ಲಿ 14 ಲಾರಿಗಳಿಂದ ಸರಬರಾಜು ಮಾಡಲು ಟೆಂಡರ್ ಪಡೆದಿರುತ್ತಾರೆ. ಆದರೆ ಗಂಗಾವತಿ ಸಗಟು ಗೋಧಾಮುನಲ್ಲಿಪ್ರಸ್ತುತವಾಗಿ ಕೇವಲ 6 ರಿಂದ 7 ಲಾರಿಗಳಿಂದ ಪಡಿತರ ಸರಬರಾಜು ಮಾಡುತ್ತಿರುತ್ತಾರೆ. ಇದರಿಂದ ನ್ಯಾಯಬೆಲೆ ಅಂಗಡಿಗಳಿಗೆ ಸರಿಯಾದ ಸಮಯಕ್ಕೆ ಪಡಿತರ ಆಹಾರಧಾನ್ಯಗಳನ್ನು ವಿತರಿಸಲು ಸಾಧ್ಯವಾಗುತ್ತಿಲ್ಲ. ಹಾಗೂ ಕೆಲವು ಸಂದರ್ಭಗಳಲ್ಲಿ ಇವರು ಕಳಿಸಿದ ಲಾರಿಗಳಿಗೆ ಆಹಾರ ಧಾನ್ಯಗಳು ಲೋಡಾದ ನಂತರ ಸಂಜೆಯಾಗುತ್ತಾ. ಬಂದರೂ ಸಹ ಚಾಲಕರ ಇಲ್ಲದಿರುವುದು ಕಂಡುಬರುತ್ತದೆ. ನಾವು ಕೇಳಿದರೆ ವಿನಾಕಾರಣ ನೆಪ ಹೇಳುವುದು. ಮತ್ತು ಬೇಜವಾಬ್ದಾರಿತನ ಕಂಡು ಬಂದಿರುತ್ತದೆ. ಆಹಾರ ಧಾನ್ಯಗಳನ್ನು ಗುತ್ತಿಗೆ ಪಡೆದ ಮಾಲೀಕರು ಇಲ್ಲಿಯವರೆಗೂ ಸಗಟು ಗೋದಮುಗೆ ಬರದೆ ಇರದೆ ಸಹ ಕಂಡುಬಂದಿರುತ್ತದೆ. ಸದ್ರಿಯವರು ಇಲ್ಲಿಯವರೆಗೆ ಬರದೆ ಕೇವಲ ಫೋನಿನ ಮುಖಾಂತರ ಸಂಪರ್ಕಿಸಿದಾಗ ನನಗೆ ಯಾವುದೇ ಸಂಬಂಧವಿಲ್ಲ ಗಂಗಾವತಿಯಲ್ಲಿ ಇರುವ ನಮ್ಮ ಸಹಾಯಕರಿಗೆ ನಿಮ್ಮ ಸಮಸ್ಯೆಗಳನ್ನು ತಿಳಿಸಿ ಎಂದು ಹೇಳುತ್ತಾರೆ. ಆದರೆ ಇಲ್ಲಿ ಅವರ ಸಹಾಯಕರಾದ ಶ್ರೀ ಶಿವರಾಜ್ ಹಿರೇಮಠ ಅವರು ನ್ಯಾಯಬೆಲೆ ಅಂಗಡಿ ಕರದ ಸಮಸ್ಯೆಗಳಿಗೆ ಸ್ಪಂದಿಸದೆ ವರ್ತನೆಯನ್ನು ಹಾಗೂ ಉಡಪೇ ಮಾತುಗಳಿಂದ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಹಿಂದೆ ಸಹ ಮಾನ್ಯ ಸಹಾಯಕ ಆಯುಕ್ತರು ಆಹಾರ ಇಲಾಖೆ ಬೆಂಗಳೂರು ಇವರಿಗೆ ಸಹ ಮೌಖಿಕವಾಗಿ ದಿನಾಂಕ 6:12.2022 ರಂದು ತಿಳಿಸಿರುತ್ತೇವೆ. ಹಾಗೂ ವಿಷಯದ ಕುರಿತು ಮಾನ್ಯ ಉಪ ನಿರ್ದೇಶಕರು ಕೊಪ್ಪಳ ಇವರು ದಿನಾಂಕ 7.12.2022 ರಂದು ಗಂಗಾವತಿ ತಹಸಿಲ್ದಾರ್ ಕಾರ್ಯದಲ್ಲಿ ತುರ್ತು ಸಭೆ ಕರೆದು ಸದರಿ ವಿಷಯದ ಕುರಿತು ಹಾಜಿ ಗ್ಲೋಬಲ್ ಟ್ರಾನ್ಸ್ಪೋರ್ಟ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೂ ಸಹ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸುತ್ತಾರೆ. ತಾಲೂಕ ಕಚೇರಿ ಶಿರಸಿ ದಾರರು ರವಿ ಅವರಿಗೆ ಎಲ್ಲಾ ನ್ಯಾಯಬೆಲೆ ಅಂಗಡಿಯ ಮಾಲೀಕರು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಗಂಗಾವತಿ ನ್ಯಾಯಬೆಲೆ ಅಂಗಡಿಯ ತಾಲೂಕು ಅಧ್ಯಕ್ಷರಾದ ಕೆ ಮಂಜುನಾಥ್ ಹಾಗೂ ದಾನನಗೌಡ ಹೇರೂರು ಎಲ್ಲಾ ನ್ಯಾಯಬೆಲೆ ಅಂಗಡಿಯ ಮಾಲೀಕರು ಭಾಗವಹಿಸಿದರು.
ವರದಿ,ಹೆಚ್ ಮಲ್ಲೇಶ್ವರ ಗಂಗಾವತಿ ತಾಲೂಕು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030