ಕೊಪ್ಪಳ: ಇಂದು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಬಾಗಲಕೋಟೆ, ತೋಟಗಾರಿಕೆ ಮಹಾವಿದ್ಯಾಲಯ ಮುನಿರಬಾದ್, ಕೊಪ್ಪಳ ಇವರಕಡೆಯಿಂದ ಹಳೇ ಗ್ರಾಮದಲ್ಲಿ ಇಂದು ಅದ್ದೂರಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ. ಹಳೇ ನಿಂಗಾಪುರ ಗ್ರಾಮದಲ್ಲಿ ತೋಟಗಾರಿಕಾ ವಿಜ್ಞಾನಗಳ ವಿದ್ಯಾಲಯ,ಬಾಗಲಕೋಟ,ಹಾಗೂ ಮಹಾವಿದ್ಯಾಲ ಮುನಿರಬಾದ್,ಕೊಪ್ಪಳ ಇವರ ಕಡೆಯಿಂದ ರಾಷ್ಟ್ರೀಯ ಸೇವಯೋಜನೆ ವಾರ್ಷಿಕ ವಿಶೇಷ ಶಿಬಿರ 2021-22 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಊರಿನ ಮುಖಂಡರಾದ, ದೇವಪ್ಪ ಹೆಗ್ಡಾಳ್, ಬರಮಪ್ಪ ಮೆಕಾಳಿ, ಮಂಜುನಾಥ್ ಹ್ಯಾಟಿ, ಕೃಷ್ಣ ಉಪ್ಪರ್, ಹಾಗೂ ಗ್ರಾ ಪ ಸದಸ್ಯರುಗಳಾದ ಶ್ರೀ ವಿರುಪಾಕ್ಷಪ್ಪ ಎಂ ಎಂ ಹಳ್ಳಿ, ಶ್ರೀಮತಿ ಅಕ್ಷತಾ ಸಂತೋಷ್ ಪಾಟೀಲ್, ಮತ್ತುಇದೆ ಊರಿನ ಹೆಸರಾಂತ ವ್ಯಕ್ತಿಯಾದ ಶ್ರೀ ಹನುಮಂತಪ್ಪ ನಾಯಕ್ ನಿವೃತ್ತ (ECO) ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೆ ಎಂ ಮಹಾದೇವ ಪ್ರಸಾದ್(KSPS ಕಮಾಂಡಟ್ IRB ಮುನಿರಬಾದ್, ಕೊಪ್ಪಳ) ಹಾಗೂ ಖಾದ್ರಿ ನರಸಿಂಹಯ್ಯ(ಪ್ರಾದೇಶಿಕ ನಿರ್ದೇಶಕರು, ರಾಷ್ಟ್ರೀಯ ಸೇವಾ ಯೋಜನೆ ಪ್ರಾಧ್ಯಾಪಕರ ಕಚೇರಿ ಬೆಂಗಳೂರು ) ಆಗಮಿಸಿದ್ದರು. ಈ ಗ್ರಾಮದ ಸುತ್ತಮುತ್ತಲಿನ ವಾತಾವರಣವನ್ನು ಸೂಚಿಗೊಳಿಸುವ ಮುಖಾಂತರವಾಗಿ ಸಭೆಯಲ್ಲಿ ನೆರೆದಿದ್ದ ಗ್ರಾಮಸ್ಥರು, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಖಾದ್ರಿ ನರಸಿಂಹಯ್ಯ ರವರು ಈ ಕಾರ್ಯಕ್ರಮವನ್ನು ಎಶಸ್ವಿಗೊಳಿಸಿದರು…
ವರದಿ. ಉಮೇಶ್. ಕಂಪ್ಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030