ಗ್ರಾಮ ಪಂಚಾಯಿತಿಯ ಮುಂದೆನೇ ತಿಪ್ಪೆಗುಂಡಿ ಕಣ್ಣಿದ್ದೂ ಕುರುಡಾಯಿತೇ ಸ್ಥಳೀಯ ಆಡಳಿತ ವ್ಯವಸ್ಥೆ????

Listen to this article

ಗ್ರಾಮ ಪಂಚಾಯಿತಿಯ ಮುಂದೆನೇ ತಿಪ್ಪೆಗುಂಡಿ ಕಣ್ಣಿದ್ದೂ ಕುರುಡಾಯಿತೇ ಸ್ಥಳೀಯ ಆಡಳಿತ ???? ವಿಜಯನಗರ ಜಿಲ್ಲೆ:- ಅವಿಭಜಿತ ಕೂಡ್ಲಿಗಿ ತಾಲೂಕಿನಿಂದ ಬೇರ್ಪಡಿಸಿ ಕೊಟ್ಟೂರು ತಾಲೂಕಿಗೆ ಹೊಂದಿಕೊಂಡಿರುವ ಚಿರಿಬಿ ಗ್ರಾಮ ಪಂಚಾಯಿತಿಯ ಆವರಣದ ಮುಂದೇನೆ ಇರುವ ತಿಪ್ಪೆಗುಂಡಿ ಮತ್ತು ಕಸದ ರಾಶಿಗಳನ್ನು ನೋಡಿದರೆ ಇದೇನು ಗ್ರಾಮ ಪಂಚಾಯಿತಿಯೋ ಅಥವಾ ಪಿಶ್ ಮಾರ್ಕೆಟ್ ಅಂತಾನೇ ಗೊತ್ತಾಗ್ತಿಲ್ಲ , ಸ್ವಚ್ಚ ಭಾರತ್ ಆಂದೋಲನ ಎಂದು ದೊಡ್ಡ ದೊಡ್ಡದಾಗಿ ಈಗಿನ ಸರ್ಕಾರಗಳು ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಸ್ವಚ್ಚತೆಗೆ ಅಂತಾನೆ ಹೆಚ್ಚು ಹೆಚ್ಚು ಅನುದಾನವನ್ನು ಪಂಚಾಯಿತಿಗಳಿಗೆ ಅನುದಾನವನ್ನು ಬಿಡುಗಡೆ ಮಾಡುತ್ತಾರೆ . ಆದರೆ ಇಲ್ಲಿನ ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಸಿಬ್ಬಂದಿ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವುದು ಅದೆಷ್ಟು ಸರಿ ಎನ್ನುವುದು ಇಲ್ಲಿನ ಸಾರ್ವಜನಿಕರ ಪ್ರಶ್ನೆಯಾಗಿದೆ. “ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ” ದೊಡ್ಡ ದೊಡ್ಡದಾಗಿ ಭಾಷಣ ಮಾಡುವ ರಾಜಕೀಯ ನಾಯಕರು ? ಮೊಳಕಾಲ್ಮೂರು ಮತ್ತು ಕೊಟ್ಟೂರು ರಾಜ್ಯ ಹೆದ್ದಾರಿಯಲ್ಲಿ ಬರುವುದೇ ಚಿರಿಬಿ ಗ್ರಾಮ ಪಂಚಾಯಿತಿ ಇದೇ ಒಟ್ಟಾರೆಯಾಗಿ ಹೇಳುವುದಾದರೆ ಇಲ್ಲಿನ ಪರಿಸ್ಥಿತಿಯನ್ನು ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳೇ ಸರಿಪಡಿಸಬೇಕು ಎನ್ನುವ ಕೂಗು ಪಂಚಾಯಿತಿ ಮುಂದೇನೆ ಸ್ವಚ್ಚತೆ ಎನ್ನುವುದು ಮಾಯಾ ವಾಗಿದೆ ಎಂದು ಇಲ್ಲಿನ ಸಾರ್ವಜನಿಕರ ಪ್ರಶ್ನೆಯಾಗಿದೆ? ಈಗಾಗಲೇ ಸುಮಾರು ದಿನಗಳಿಂದ ಇಲ್ಲೇ ಕಸದ ರಾಶಿ ಮತ್ತು ತಿಪ್ಪೆಗುಂಡಿಳನ್ನು ಇದ್ದು, ಕೂಡಲೇ ಇವುಗಳನ್ನು ತೆರವು ಗೊಳಿಸಿ ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಾರ್ವಜನಿಕರ ಮನವಿಯಾಗಿದೆ.

ವರದಿ. ಬಸಪ್ಪ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend