ಶ್ರೀ ಶರಣಬಸವೇಶ್ವರ ಕಾರ್ತಿಕೋತ್ಸವದ ಪೂರ್ವಭಾವಿ ಸಭೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನಮಡಗು ಶ್ರೀ ಶರಣಬಸವೇಶ್ವರ ಕಾರ್ತಿಕೋತ್ಸವ ಪೂರ್ವಭಾವಿ ಸಭೆ ಈ ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ನಿಂಗಪ್ಪ ರವರು ದಿನಾಂಕ :01-12-2022 ರಂದು ನಡೆಯಲಿರುವ ಶ್ರೀ ಶರಣಬಸವೇಶ್ವರ ಕಾರ್ತಿಕೋತ್ಸವ ಸಂಭ್ರಮದಲ್ಲಿ ಯಾವುದೇ ರೀತಿ ಜಗಳ ಮತ್ತು ಮಧ್ಯ ಮಾರಾಟ ಹಾಗೂ ಮುಖ್ಯವಾಗಿ ಅಕ್ಕ ಪಕ್ಕ ಗ್ರಾಮದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತಾದಿಗಳಿಗೆ ಅನುಕೂಲ ವಾಗುವಂತೆ ಜವಾಬ್ದಾರಿತವಾಗಿ ಗ್ರಾಮದ ಜನರು ಯುವಕರು ಮುಖಂಡರು ಶಾಂತ ರೀತಿಯಿಂದ ಕಾರ್ತಿಕೋತ್ಸವವನ್ನು ಆಚರಿಸಬೇಕೆಂದು ಹಾಗೂ ಕಾನಮಡಗು ಶ್ರೀ ಶರಣಬಸವೇಶ್ವರ ಕಾರ್ತಿಕೋತ್ಸವಕ್ಕೆ ಸೂಕ್ತ ಬಂದಾಬಸ್ತ್ ಗಾಗಿ ಹೊಸಹಳ್ಳಿ ಪೊಲೀಸ್ ಠಾಣಾ ಸಿಬ್ಬಂದಿಗಳು ಸೇವೆಯನ್ನು ಒದಗಿಸಲಿದ್ದಾರೆ.
ಆದ್ದರಿಂದ ಊರಿನ ಜನರು ಅಕ್ಕ ಪಕ್ಕ ಜನರು ಸಹಕರಿಸುವಂತೆ ಈ ಒಂದು ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಇದೇ ಸಂದರ್ಭದಲ್ಲಿ ಆಲೂರು ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ. A O ಮಹದೇವಮ್ಮ ಹನುಮಂತಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮುಮ್ತಾಜ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ನಿಂಗಪ್ಪ ಮುಖ್ಯವಾಗಿ ಕಾನಮಡಗು ಗ್ರಾಮದ ಮುಖ್ಯಸ್ಥರು ಶ್ರೀ ಶರಣಬಸವೇಶ್ವರ ದೇವಾಲಯದ ಮುಖ್ಯಸ್ಥರು ಆಲೂರು ಗ್ರಾಮ ಪಂಚಾಯಿತಿಯ ಎಲ್ಲಾ ಹಳ್ಳಿ ವಾರ್ಡ್ಗಳ ಸದಸ್ಯರು ಹಾಗೂ ಊರಿನ ಜನರು ಯುವಕರು ಈ ಒಂದು ಪೂರ್ವಭಾವಿ ಸಭೆಯಲ್ಲಿ ಹಾಜರಾಗಿ ನಂತರ ಸಂವಿಧಾನ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಿದರು.
ವರದಿ : ಸಿ ಅರುಣ್ ಕುಮಾರ್ ಜುಮ್ಮೊಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030