ಇಂದು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಹಾರಕಭಾವಿ ಹಾಗೂ ನಿಂಬಳಗೆರೆ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು
ಹಾರಕಭಾವಿ ಯಿಂದ ಶಾಂತನಹಳ್ಳಿ ಓಡುವ ರಸ್ತೆ ಅಭಿವೃದ್ಧಿ 3 ಕೋಟಿ
ಸೂಲದಹಳ್ಳಿ ಯಿಂದ ಹಾರಕಭಾವಿ ಓಗುವ ರಸ್ತೆ ಅಭಿವೃದ್ಧಿ 2.5 ಕೋಟಿ
ನಿಂಬಳಗೇರೆ ಯಿಂದ ಮಂಗಾಪುರ ಓಗುವ ರಸ್ತೆ ಅಭಿವೃದ್ಧಿ 2.5 ಕೋಟಿ
ನಿಂಬಳಗೇರೆ ಗ್ರಾಮದ ಕಲ್ಲೇಶ್ವರ ದೇವಸ್ಥಾನದಿಂದ ಯರ್ರಮ್ಮ ನಹಳ್ಳಿಗೆ ಹೋಗುವ ರಸ್ತೆ ಬದಿ ಚರಂಡಿ ನಿರ್ಮಾಣ 57.59 ಲಕ್ಷ
ಈ ಸಂದರ್ಭದಲ್ಲಿ ಸ್ಥಳೀಯ ಚುನಾಯಿತ ಜನ ಪ್ರತಿನಿಧಿಗಳು ಬಿಜೆಪಿ ಪಕ್ಷದ ಮುಖಂಡರು ಅಭಿಮಾನಿಗಳು ಅಧಿಕಾರಿಗಳು ಮೊದಲಾದವರಿದ್ದರು ಹಾಗೂ ಕೂಡ್ಲಿಗಿ ತಾಲೂಕಿನಲ್ಲಿ ಮುಂಬರುವ ಚುನಾವಣೆಗೆ ಹಲವಾರು ಬಿಜೆಪಿ ಕಾರ್ಯಕರ್ತರ ಹೆಸರು ಕೇಳಿಬರುತ್ತಿರುವುದು ಮುಂಬರುವ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ, ಟಿಕೆಟ್ ಕೊಟ್ಟರೆ ಅವರ ಗೆಲವು ಖಚಿತ ಎನ್ನುವ ಮಾತಿಗೆ ತಾಲೂಕಿನ ಹಲವಾರು ಹಳ್ಳಿ, ಮಟ್ಟದಲ್ಲಿ, ಗ್ರಾಮಪಂಚಾಯಿತಿಯ ಮಟ್ಟದಲ್ಲಿ ಕೇಳಿಬರುತ್ತಿರುವುದು ಒಂದೇ ಮಾತು,ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿರುವ, ಎನ್, ವೈ, ಯವರ ಕಾರ್ಯರೂಪದ ಶ್ರಮಕ್ಕೆ ನಾವು ಸದಾ ಚಿರಋಣಿ ಮತ್ತೊಮ್ಮೆ, ಅವರೇ ಗೆದ್ದು ಬರಲಿ ಹಾಗೂ ಮುಂಬರುವ ಚುನಾವಣೆಯಲ್ಲಿ ಅವರಿಗೆ ನಮ್ಮ ಕ್ಷೇತ್ರದಲ್ಲಿ ಟಿಕೆಟ್ ಕೊಡಲಿ ಎಂಬುದೇ ಅವರ ಮತ್ತು ಜನ ಸಾಮಾನ್ಯರ ಒಂದು ಅಭಿಪ್ರಾಯ, ಯಾಕೆ ಹೊಸಬರಿಗೆ ಅವಕಾಶ ಕೊಡಲಿ ಬಿಡಿ ಎನ್ನುವ ಒಂದು ಮಾತಿಗೆ ಹಲವಾರು ಸಾರ್ವಜನಿಕರ ಅಭಿಪ್ರಾಯ ಒಂದೇ, ಕೂಡ್ಲಿಗಿ ತಾಲೋಕು ರಾಜ್ಯದಲ್ಲಿ ಅತೀ ಇಂದುಳಿದ ತಾಲೋಕು ಅದನ್ನು ಈ ಒಂದು ರೀತಿಯಲ್ಲಿ ಅಭಿವೃದ್ಧಿಯನ್ನು ಮಾಡಿರುವ ಹಾಲಿ ಶಾಸಕರಿಗೆ ನಾವು ಸದಾ ಚಿರಋಣಿ ಹಾಗೂ ನಮ್ಮ ಒಂದು ತಾಲೋಕು ಅವರ ಪರಿಶ್ರಮದಲ್ಲಿ ಅಭಿವೃದ್ಧಿ ಕಾಣಲಿ ಎನ್ನುವುದೇ ನಮ್ಮ ಉದ್ದೇಶ ಎನ್ನುತ್ತಾರೆ. ತಾಲೂಕಿನ ಮತದಾರ ಪ್ರಭುಗಳು ಯಾಕೆಂದರೆ ಇವತ್ತು ಬರೀ, ಬಿಜೆಪಿ ಕಾರ್ಯಕರ್ತ ಎನ್ನುವುದನ್ನು ಹೇಳಿಕೊಂಡು ಕೋಟ್ಯಾನುಗಟ್ಟಲೆ ಆಸ್ತಿ ಮಾಡಿರುವ ಉದಾಹರಣೆಗಳು ಸಾಕಷ್ಟು ಇವೆ, ಅವರ ಒಂದು ಕಾರ್ಯವೈಖರಿಯ ಫೋಟೋ, ವಿಡಿಯೋಗಳು ಹರಿದಾಡುತ್ತಿರುವ ಸನ್ನಿವೇಶದಲ್ಲು ತಾಲೂಕಿನ ಮತದಾರರು ನನ್ನ ಒಂದು ಪರಿಶ್ರಮವನ್ನು ನೋಡಿ ಮತದಾನ ಮಾಡಿ, ಮತ್ತೆ ನಿಮ್ಮಗಳ ಸೇವೆ ಮಾಡಲು ಅವಕಾಶ ಮಾಡಿಕೊಡಲು ಎದರು ದಾರಿಯನ್ನು ನೋಡುತ್ತಿರುವ ಶಾಸಕರೇ ಲೇಸು ಎನ್ನುತ್ತಾರೆ ಕೂಡ್ಲಿಗಿ ತಾಲೂಕಿನ ಮತದಾರ ಪ್ರಭುಗಳು. ಮತ್ತೆ ಎನ್, ವೈ, ಗೋಪಾಲಕೃಷ್ಣ ನಮ್ಮ ತಾಲೂಕಿನ ಶಾಸಕರು ಎನ್ನುವ ಕೂಗು ಇಡೀ ತಾಲೂಕಿನಲ್ಲಿ ಕೇಳಿಬರುತ್ತಿದೆ ನೋಡೋಣ ಯಾರಗಬಹುದು ಮುಂದಿನ ಚುನಾವಣೆಯಲ್ಲಿ ತಾಲೂಕಿನ ಚುಕ್ಕಾಣಿಯನ್ನು ಇಡಿಯುವ ಅದೃಷ್ಟಶಾಲಿ…..???
ವರದಿ. ವಿರೇಶ್, ಕೆ, ಎಸ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030