ನಿಂಬಳಗೇರಿ ಶ್ರೀ ಬಿ.ಕೆ.ವಿ ಸರ್ಕಾರಿ ಪ್ರೌಢಶಾಲೆಗೆ ಶಾಸಕ ಎನ್.ವೈ.ಜಿ ಬೇಟಿ
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರ ಕೊಟ್ಟೂರು ವ್ಯಾಪ್ತಿಯ ನಿಂಬಳಗೇರಿ ಶ್ರೀ ಬಿ.ಕೆ.ವಿ ಸರ್ಕಾರಿ ಪ್ರೌಢಶಾಲೆಗೆ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಶಾಸಕ ಎನ್.ವೈ ಗೋಪಾಲಕೃಷ್ಣ ಅವರು ಭೇಟಿ ನೀಡಿದ್ದರು. ಶಾಲಾ ಮಕ್ಕಳಿಂದ ಶಾಸಕರಿಗೆ ಹೂ ಹೋಗುಚಿ ನೀಡಿ ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡರು. ನಂತರ ಶಾಲೆಯ ಕೊಠಡಿಗಳು ಹಾಗೂ ಲ್ಯಾಬುಗಳನ್ನು ವೀಕ್ಷಣೆ ಮಾಡಿದರು. ಇದೆ ವೇಳೆ ರಾಜ್ಯ ಮಟ್ಟದ ಸ್ವಾಭಿಮಾನಿ ಸಾರ್ವಜನಿಕ ಶಾಲೆ ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು. ನಂತರ ಶಾಲೆಯ ಮುಖ್ಯ ಗುರುಗಳಾದ ಜಿ.ಪಕೀರಫ ಮತ್ತು ಶಾಲೆಯ ಎಲ್ಲಾ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಎನ್.ವೈ ಗೋಪಾಲಕೃಷ್ಣ ಅವರು ಮಾತನಾಡಿ ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಇಂತಹ ಸರ್ಕಾರಿ ಫೌಡಶಾಲೆಯ ಇರವುದು ಅತ್ಯಂತ ಹೆಮ್ಮೆಯ ವಿಷಯವಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾಗಿ ಬೆಳೆಯಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಪಕೀರಫ, ಎಸ್ಡಿಎಂಸಿ ಅದ್ಯಕ್ಷರಾದ ಪ್ರಕಾಶ್ ಗೌಡ, ಜೆ ಸಿದ್ದೇಶ್, ಪ್ರೌಢಶಾಲಾ ಸಹಶಿಕ್ಷಕರು ಸಂಘದ ಜಿಲ್ಲಾ ಖಜಾಂಚಿಗಳಾದ ಬಣಕಾರ ಪತ್ರೇಶ, ನಾಗರಾಜ್, ವಿದ್ಯಾರಣ್ಯ, ಹಾಲಪ, ವೀರಭದ್ರಪ್ಪ, ಶರ್ಮತ ಕಣದಮನಿ, ಶಿವಪುತ್ರಗೌಡ, ಅಂಜಿನಮ, ಅಮೃತಮ್ಮ, ಮಂಗಳಗೌರಮ್ಮ, ಸಪ್ರ್ಬಭೂಷಣ, ಮಲ್ಲಪ್ಪ, ಸಿದ್ದೇಶ್, ಪಾಟಿಲ್ ಸೇರಿದಂತೆ ಶಾಲಾ ಸಿಬ್ಬಂದಿಗಳು, ಎಸ್ಡಿಎಂಸಿ ಸದಸ್ಯರು, ಗ್ರಾಮ ಪಂಚಾಯತಿ ಅಧ್ಯಕ್ಷರು, ಸರ್ವ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.
ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030