ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ (ರಿ). ರಾಜ್ಯಾಧ್ಯಕ್ಷರು ಉಜ್ಜಿನಿ ಜಗದ್ಗುರುಗಳ ಭೇಟಿ,, 28-7-22ರ ಗುರುವಾರದಂದು ಕೂಡ್ಲಿಗಿ ತಾಲೂಕಿನ ಸುಪ್ರಸಿದ್ಧ ಉಜ್ಜಿನಿ ಪಂಚಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ 1008 ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದ ಪಡೆದ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ). ಸಂಘದ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಉಜ್ಜಿನಿ ಕ್ಷೇತ್ರಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದು ಹಾಗೂ ಶ್ರೀಗಳ ಆಶೀರ್ವಾದ ಪಡೆದರು ನಂತರ ಸ್ವಾಮೀಜಿಗಳೊಂದಿಗೆ ಮಾತನಾಡಿ ರಾಜ್ಯದಲ್ಲಿ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘದ ಬಗ್ಗೆ ಮಾಹಿತಿ ನೀಡಿದರೂ ಇದೇ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕಿನ ಕಾರ್ಯನಿರದ ಪತ್ರಕರ್ತರ ಧ್ವನಿ ಸಂಘದ ಪದಾಧಿಕಾರಿಗಳನ್ನು ಪರಿಚಯಿಸಿ ತಾಲೂಕಿನಲ್ಲಿ ನಡೆಯುವ ಪತ್ರಿಕಾ ದಿನಾಚರಣೆಯನ್ನು ನಡೆಸುವುದಕ್ಕೆ ಶ್ರೀಗಳನ್ನು ಆಹ್ವಾನಿಸಿದರು.
ಹಾಗೂ ಶ್ರೀ ಗಳು ಬರುವುದಕ್ಕೂ ಒಪ್ಪಿಗೆ ನೀಡಿ ಕಾರ್ಯಕ್ರಮದ ದಿನಾಂಕವನ್ನು ತಿಳಿಸಿ ಎಂದು ಹೇಳಿದರು ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಸರ್, ಹಾಗೂ ಕೂಡ್ಲಿಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ತಾಲೂಕ ಅಧ್ಯಕ್ಷರಾದ ಎಲೆ ನಾಗರಾಜ, ಉಪಾಧ್ಯಕ್ಷರುಗಳಾದ ಕಕ್ಕುಪ್ಪಿ ಬಸವರಾಜ್, ಕೆ. ರಾಘವೇಂದ್ರ, ಕಾರ್ಯಾಧ್ಯಕ್ಷರಾದ ಬಾಣದ ಶಿವಮೂರ್ತಿ, ಸಹ ಕಾರ್ಯದರ್ಶಿ ಬಿ ಎಂ ಬಸವರಾಜ್ (ಬಸಣ್ಣಿ). ಹಾಗೂ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ ಮಂಜುನಾಥ್, ಕಾನಹೊಸಹಳ್ಳಿ ವೀರೇಶ್,ಪತ್ರಕರ್ತರ ಧ್ವನಿ ಸಂಘದ ತಾಲೂಕು ಕಾರ್ಯದರ್ಶಿ, ಜಿ ಅನಿಲ್ ಕುಮಾರ್, ಹಾಗೂ ಖಜಾಂಚಿ ಬಸಪ್ಪ (ಅಂಗಡಿ )ಹಾಗೂ ಬಿಜೆಪಿ ನಗರ ಘಟಕದ ಅಧ್ಯಕ್ಷರಾದ ಗುನ್ನಳ್ಳಿ ನಾರಾಯಣ, ಕಲಾವಿದ ಬಣಕಾರ್ ಮೂಗಣ್ಣ ಹಿರೇ ಹೆಗ್ಡಾಳ್ ರಾಜ್ಯಾಧ್ಯಕ್ಷರ ಆಪ್ತಬಳಗದವರು ಸಹ ಉಪಸ್ಥಿತರಿದ್ದರು….
ವರದಿ. ಶಶಿಕುಮಾರ್, ಜೆ, ಆಲೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030