ಕ, ಪ, ಸಂ,ತಾಲೂಕು ಅಧ್ಯಕ್ಷರಾಗಿ ಬಡಿಗೇರ ನಾಗರಾಜ ಆಯ್ಕೆ
ಕೂಡ್ಲಿಗಿ :ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾಗಿ ಹೊಸಪೇಟೆ ಟೈಮ್ಸ್ ದಿನಪತ್ರಿಕೆ ವರದಿಗಾರ ಬಡಿಗೇರ ನಾಗರಾಜ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜುಲೈ 14ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಗೋಪಾಲ್ ಬಂಡ್ರಿ,ರಾಜ್ಯ ಸಮಿತಿ ಸದಸ್ಯರಾದ ರಾಜು ಪಾಳೇಗಾರ, ರಾಜಶೇಖರ್, ನಂದೀಶ್, ಇವರ ಉಪಸ್ಥಿತಿಯಲ್ಲಿ ಜಿಲ್ಲಾಧ್ಯಕ್ಷ ಮುರಳೀಧರ ಶೆಟ್ರು, ಗೌರವಾಧ್ಯಕ್ಷ ಡಿ. ಎಂ. ಈಶ್ವರಪ್ಪ ಇವರನ್ನು ನೇಮಕ ಮಾಡಲಾಗಿ, ತಾಲೂಕಿನ ಸಂಘದ ಸರ್ವ ಸದಸ್ಯರ ಒಮ್ಮತದಂತೆ ಗೌರವಧ್ಯಕ್ಷರಾಗಿ ಮೀನಕೆರೆ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಎ, ಎಂ,ಮಲ್ಲಿಕಾರ್ಜುನ ಸ್ವಾಮಿ, ಸೋಲ್ಲೇಶ, ಪ್ರಧಾನ ಕಾರ್ಯದರ್ಶಿ ಸಾಲುಮನಿ ರಾಘವೇಂದ್ರ, ಖಜಾಂಚಿ ಹೂಡೆಮ್ ಮಂಜುನಾಥ, ಸಂಘಟನಾ ಕಾರ್ಯದರ್ಶಿ ಜಿ, ರಾಘವೇಂದ್ರ, ಸಹ ಕಾರ್ಯದರ್ಶಿ ತಿಪ್ಪಳ್ಳಿ ಮಾರೇಶ್, ಹೊಸಹಳ್ಳಿ ವೆಂಕಟೇಶ್, ಅಮಲಾಪುರದ ಅಂಜಿನಪ್ಪ ಇವರು ಆಯ್ಕೆಯಾದರು..
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030