ಕೂಡ್ಲಿಗಿ: ದಾವಣಗೆರೆಯಲ್ಲಿ ನಡೆಯುವ ಶ್ರೀ ಸಿದ್ದರಾಮೇಶ್ವರ ರಥೋತ್ಸವದ ಬಗ್ಗೆ ಪೂರ್ವಭಾವಿ ಸಭೆ
ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭೋವಿ ಜಿಲ್ಲಾ ಸಂಘ ಪದಾಧಿಕಾರಿಗಳ ಹಾಗೂ ತಾಲೂಕು ಭೋವಿ ಸಂಘದಅಧ್ಯಕ್ಷರ. ಪದಾಧಿಕಾರಿಗಳ ಮುಖಂಡತ್ವದಲ್ಲಿ ಶ್ರೀ ಸಿದ್ದರಾಮೇಶ್ವರ ರಥೋತ್ಸವದ ಬಗ್ಗೆ ಭೋವಿ ಸಮಾಜದ ಮುಖಂಡರನ್ನು ಸಭೆ ಕರೆಯಲಾಗಿತ್ತು. ದಿನಾಂಕ1.8.2022 ರಂದು ದಾವಣಗೆರೆಯಲ್ಲಿ ನಡೆಯುವ ಶ್ರೀ ಸಿದ್ದರಾಮೇಶ್ವರ ಅರವತ್ತನೆಯ ರಥೋತ್ಸವದ ಅಂಗವಾಗಿ ನಡೆಯುವ ಸಿದ್ಧರಾಮೇಶ್ವರ ರಥೋತ್ಸವಕ್ಕೆ ಭೋವಿ ಸಮಾಜದ ಎಲ್ಲಾ ಮುಖಂಡರು ಒಗ್ಗಟ್ಟಿನಿಂದ ಎಲ್ಲಾ ಭೋವಿ ಸಮಾಜದವರನ್ನು ಬಂಧು-ಮಿತ್ರರನ್ನು ಪಕ್ಷ ಬೇಧಗಳನ್ನು ಮರೆತು ರಥೋತ್ಸವದಲ್ಲಿ ಭಾಗವಹಿಸುವಂತೆ ಪಿಎಚ್ ದೊಡ್ಡ ರಾಮಣ್ಣನವರು ಭೋವಿ ಸಮಾಜದ ಬಂಧುಗಳಿಗೆ ಕರೆ ನೀಡಿದರು. ಭೋವಿ ಸಂಘದ ತಾಲೂಕು ಅಧ್ಯಕ್ಷರಾದ ಹನುಮಂತಪ್ಪನವರ ಮಾತನಾಡಿ ಭೋವಿ ಸಮಾಜದ ಎಲ್ಲ ಮುಖಂಡರು ಹಾಗೂ ಬಂಧುಗಳು ಸಮುದಾಯದ ಜನರನ್ನು ಒಂದು ಕಡೆ ಒಗ್ಗೂಡಿಸಿ. ಸ್ವಯಿಚ್ಛೆಯಿಂದ ರಥೋತ್ಸವಕ್ಕೆ ಭಾಗವಹಿಸುವಂತೆ ಮನವಿ ಮಾಡಿದರು. ನಂತರ ರಥೋತ್ಸವದ ಕಾರ್ಯಕ್ರಮಕ್ಕೆ ಪೂರ್ವಭಾವಿ ಸಿದ್ಧತೆ ಮಾಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಭೋವಿ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಎಚ್ ಬುಡ್ಡ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರಮಣಪ್ಪ, ಜಂಟಿ ಕಾರ್ಯದರ್ಶಿ ನಾಗರಾಜ್, ಕೈವಲ್ಯಾಪುರರಾಜಪ್ಪ ಸೋಮಣ್ಣ, ಪ್ರಧಾನ ಕಾರ್ಯದರ್ಶಿ ಬುಜ್ಜಿ ಹನುಮಂತಪ್ಪ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು, ಭೋವಿ ಸಮಾಜದ ಮುಖಂಡರು ಉಪಸ್ಥಿತರಿದ್ದರು…
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030