ಇಂದು ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನ ಕೋವಿಡ್ 19 ರಿಂದ ಮೃತಪಟ್ಟ ಕುಟುಂಬದವರಿಗೆ ಚೆಕ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಮೃತಪಟ್ಟ ಕುಟುಂಬದವರಿಗೆ ತಲಾ ₹ಒಂದು ಲಕ್ಷ ರೂಗಳ ಚೆಕ್ಕನ್ನು ಮಾನ್ಯ ಜನಪ್ರಿಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ಕೂಡ್ಲಿಗಿ ರವರ ಸೂಚನೆಯಂತೆ
ಇಂದು ಪ್ರವಾಸಿ ಮಂದಿರ ಆವರಣದಲ್ಲಿ 22 ಕುಟುಂಬಗಳಿಗೆ ಚೆಕ್ಕನ್ನು ವಿತರಣೆ ಮಾಡಲಾಯಿತು
ಕಾರ್ಯಕ್ರಮದಲ್ಲಿ ತಹಸಿಲ್ದಾರ ಶ್ರೀ ಜಗದೀಶ್ ಹಾಗೂ ತಾಲ್ಲೂಕು ಪಂ ಇ.ಓ ಬಸಣ್ಣ ,ಶಾಸಕರ ಆಪ್ತ ಸಹಾಯಕ ಬಿ.ಶ್ರೀಕಾಂತ್ , ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀ ಚೆನ್ನಪ್ಪ ನಿಕಟಪೂರ್ವ ಅಧ್ಯಕ್ಷರಾದ ಕೆ ಎಚ್ ವೀರನಗೌಡರು, ರಾಷ್ಟ್ರೀಯ ಪರಿಷತ್ ಸದಸ್ಯರಾದ ಕೆ ಎಂ ತಿಪ್ಪೇಸ್ವಾಮಿ,ಬಿಜೆಪಿ ಮುಖಂಡರಾದ ಟಿ ಜಿ ಮಲ್ಲಿಕಾರ್ಜುನಗೌಡ, ಭೀಮೇಶ್, ಶಿವಮೂರ್ತಿ, ಬಿಜೆಪಿ ಮಂಡಲ ಕಾರ್ಯದರ್ಶಿ ಪಿ ಮಂಜುನಾಥ ನಾಯಕ ,ಬಿಜೆಪಿ ನಗರ ಘಟಕ ಅಧ್ಯಕ್ಷ ಗುನ್ನಳ್ಳಿ ನಾರಾಯಣ, ವಾಗೀಶ್ ಮೂರ್ತಿ ದಿನೇಶ್ ನಾಯ್ಕ ಪ.ಪಂ ಸದಸ್ಯರಾದ ಸಚಿನ್ ಇನ್ನಿತರ ಮುಖಂಡರುಗಳು ಭಾಗವಹಿಸಿದ್ದರು…
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030