ವಿಶ್ವ ಮಾನವನಿಗೆ ನಮನ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿಯ ಹೊಸಹಳ್ಳಿಯ ನಾಡಕಚೇರಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಆಪರೇಟರ್ ಮಂಜುನಾಥ್ ಮಾತನಾಡಿ ಕುವೆಂಪುರವರು ನಾವುಗಳು ಕೇವಲ ಮನುಷ್ಯ ಅಥವಾ ಮಾನವರಾಗದೇ ವಿಶ್ವ ಮಾನವರಾಗೋಣ ಎಂದಿದ್ದಾರೆ. ಇಂತಹ ಮಹನೀಯರನ್ನು ಫೋಟೋ ಗಷ್ಟೇ ಸೀಮಿತಗೊಳಿಸದೆ ಅವರ ವಿಚಾರಧಾರೆ. ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ. ನಮ್ಮ ನಡುವಳಿಕೆಗೆ ಬದಲಾವಣೆ ಮಾಡಿಕೊಳ್ಳೋಣ ಎಂದರು.
ನಾಡಕಛೇರಿಯ ವಿಷಯ ನಿರ್ವಾಹಕರಾದ ಅನಿತಾ ಪೂಜಾರ್ ಮಾತನಾಡಿ ವೈಚಾರಿಕತೆಗೂ ಬಹಳ ಹೊತ್ತು ಕೊಟ್ಟಿದ್ದ ಅವರು ಮೂಢನಂಬಿಕೆ ಸೇರಿದಂತೆ ಅಜ್ಞಾನ ಹೋಗಲಾಡಿಸಿ. ವೈಚಾರಿಕತೆ ಬೆಳೆಸಿಕೊಳ್ಳಿ ಎಂದು ಯುವಜನಾಂಗಕ್ಕೆ ಕರೆ ನೀಡಿದ್ದು ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳಲು ಪ್ರೇರೇಪಿಸುತ್ತಿದ್ದರೆಂದರು.
ಇದೇ ಸಂದರ್ಭದಲ್ಲಿ ಆಪರೇಟರ್ ಸಿದ್ದೇಶ್. ನಾಗರಾಜ್.ಪೋಟೋ ನಾಗರಾಜ. ಹನುಮಂತಪ್ಪ . ಶಶಿ ಕುಮಾರ್ ಯಾದವ್ ಸೇರಿ ಇತರರು ಉಪಸ್ಥಿತರಿದ್ದರು..
ವರದಿ.ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030