ವಿಜಯನಗರ: ಕೂಡ್ಲಿಗಿ ತಾಲೂಕಿನ ಮಾಕನಡಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರಿಹಟ್ಟಿ ಗ್ರಾಮದ ಅಂಗನವಾಡಿ ಬಿ. ಕೇಂದ್ರದ 5,00000 – ಲಕ್ಷದ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಯನ್ನು ಅಳತೆ ಪಟ್ಟಿಯಲ್ಲಿ ಇರುವ ಹಾಗೆ ಕೆಲಸ ಮಾಡುತ್ತಿಲ್ಲ.
ಮೊದಲನೆಯ ಹಂತವನ್ನು ಎನ್ ಎಂ ಅರ್ ತೆಗೆದು ಜೆಸಿಬಿ ಯಂತ್ರದ ಮೂಲಕ ಕಾಮಗಾರಿಯನ್ನು ಮಾಡಿದ್ದು ಅಳತೆ ಪಟ್ಟಿಯಲ್ಲಿ ಇರುವಹಾಗೆ ಗುಣಮಟ್ಟದ ಕಾಮಗಾರಿ ಮಾಡದೆ, ಕೆಂಪು ಮರಳು ಮಿಶ್ರಿತ, ಕಡಿಮೆ ಸಿಮೆಂಟ್ ಉಪಯೋಗಿಸಿ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ಕುರಿಹಟ್ಟಿ ಗ್ರಾಮದ ಎಂ ಅಜ್ಜಯ್ಯ ಹಾಗೂ ಗ್ರಾಮದ ನಿವಾಸಿಗಳು ಅರೋಪಿಸಿದ್ದಾರೆ. ಆದ ಕಾರಣ ಇದಕ್ಕೆ ಸಂಬಂಧಿಸಿದ ತಾಲ್ಲೂಕ್ ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬೇಟಿನೀಡಿ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ..
ವರದಿ.ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030