ತಾಸುಗಟ್ಟಲೇ ನೀರಿನಲ್ಲಿ ತೇಲಿ ಬದುಕುಳಿದ 60ರ ವೃದ್ದೆ. ಕೂಡ್ಲಿಗಿ. ಜು. 28:- ಬಹಿರ್ದೆಸೆ ಮುಗಿಸಿ ತೊಳೆದುಕೊಳ್ಳಲು ಹೋಗಿ ರಾಮದುರ್ಗ ಕೆರೆಯಲ್ಲಿ ಆಕಸ್ಮಿಕ ಕಾಲು ಜಾರಿ ಬಿದ್ದು ಈಜಿ ನಡುಕೆರೆಗೆ ಹೋಗಿ 3ತಾಸು ತೇಲಾಡಿದ 60ವರ್ಷದ ವೃದ್ದೆ ಯೊಬ್ಬಳು ಬದುಕುಳಿದ ವಿಸ್ಮಯಕಾರಿ ಘಟನೆ ಇಂದು ಮಧ್ಯಾಹ್ನ ದಿಂದ ಸಂಜೆ 5-20ರ ಮದ್ಯವದಿಯಲ್ಲಿ ತಾಲೂಕಿನ ರಾಮದುರ್ಗದ ಕೆರೆಯಲ್ಲಿ ಜರುಗಿದ್ದು ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಗೆ ಕಳುಹಿಸಲಾಗಿದೆ. ಬೊಮ್ಮಕ್ಕ (60) ಹರಪನಹಳ್ಳಿ ತಾಲೂಕು ಮೈದೂರು ಗ್ರಾಮದವಳೆಂದು ತಿಳಿದಿದೆ. ಈಕೆಯು ಮಗಳನ್ನು ಮಾತನಾಡಿಸಿಕೊಂಡು ಹೋಗಲು ಸಿಡೆಗಲ್ಲಿಗೇ ಹೋಗುವ ಮುಂಚೆ ಮಧ್ಯಾಹ್ನ 3-30ರ ಸುಮಾರಿಗೆ ಬಹಿರ್ದೆಸೆ ಹೋಗಿ ರಾಮದುರ್ಗ ಕೆರೆಯಲ್ಲಿ ತೊಳೆದುಕೊಳ್ಳಲು ಹೋದಾಗ ಆಕಸ್ಮಿಕ ಕಾಲು ಜಾರಿ ಕೆರೆಯಲ್ಲಿ ಬಿದ್ದಿದ್ದರಿಂದ ಮೇಲೆಬರಲು ಆಗದೆ ಸ್ವಲ್ಪ ಈಜು ಬರುತ್ತಿದ್ದರಿಂದ ಹಾಗೇ ತೇಲಿಕೊಂಡು ನಡುಕೆರೆಯಲ್ಲಿ ಇದ್ದಾಗ ಕೆರೆಯಲ್ಲಿ ಯಾರದೋ ಮೃತ ದೇಹ ತೇಲುತ್ತಿದೆ ಎಂದು ಗ್ರಾಮದ ಕೆಲ ಜನರು ಗುಡೇಕೋಟೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದರಿಂದ ತಕ್ಷಣ ಗುಡೇಕೋಟೆ ಪಿಎಸ್ಐ ಸಿಬ್ಬಂದಿ ಸೇರಿ ಈಜು ಬರೋರನ್ನ ನೀರಿನಲ್ಲಿಳಿಸಿ ತೇಲುತ್ತಿದ್ದ ದೇಹದತ್ತ ಹೋಗುತ್ತಿದ್ದಂತೆ ಅಜ್ಜಿಯು ಕೈಬೀಸಿ ಕರೆದಿದ್ದನ್ನು ಕಂಡು ಈಜಿಕೊಂಡು ಹೋದವರು ಆಶ್ಚರ್ಯ ಚಕಿತರಾಗಿ ನಡುಕೆರೆಯಲ್ಲಿದ್ದ ಅಜ್ಜಿಯನ್ನು ಕೆರೆದಂಡೆಗೆ ತಂದು ಹಾಕಲಾಗಿ ನೀರು ಕುಡಿದಿದ್ದ ಅಜ್ಜಿಯನ್ನು ತಕ್ಷಣ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಅಜ್ಜಿಯ ಸಂಬಂಧಿಗಳನ್ನು ಕರೆಹಿಸಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಗೆ ಕಳುಹಿಸಲಾಗಿದ್ದು ಚೇತರಿಸಿಕೊಂಡಿದ್ದಾಳೆಂದು ತಿಳಿದಿದೆ…
ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030