ಖಾತ್ರಿಯಿಲ್ಲದ ಉದ್ಯೋಗ:ಗುಳೇ ಹೊರಟ ತಾಂಡದ ಜನ.
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಕೆಲ ತಾಂಡದವರು,ಉದ್ಯೋಗ ಅರಸಿ ನೂರಾರು ಕುಟುಂಬಗಳು ಬೇರೆಡೆಗೆ ಗುಳೇ ತೆರಳಿದ್ದಾರೆ.
ತಾಂಡವೊಂದರಿಂದ ಐನೂರು ಸಾವಿರ ಜನ ಗುಳೇಹೋಗುತ್ತಿದ್ದಾರೆ,
ಉದ್ಯೋಗ ಇಲ್ಲದೆ ಗ್ರಾಮ ತೊರೆದು ಬೇರೆಡೆಗೆ ಉದ್ಯೋಗ ಅರಸಿ ನಾನೂರು ಐನೂರು ಕಿಮೀ ದೂರದ ಊರುಗಳಿಗೆ ಕುಟುಂಬ ಸಮೇತ ಲಾರಿಗಳಲ್ಲಿ ಗ್ರಾಮದಿಂದ ಗೋವಿಂದ ಗಿರಿತಾಂಡದಿಂದ 500ಜನ ಕಾರ್ಮಿಕರು,
ಬಂಡೇ ಬಸಾಪುರ ತಾಂಡದಿಂದ 1500ಜನ ಗುಳೇ ಹೋಗಿದ್ದಾರೆ.
ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ 20ನೇ ವಾರ್ಡ್ ಗೋವಿಂದಗಿರಿ ತಾಂಡದಿಂದ 450ಜನ ಗುಳೇ ಹಾಗೂ ಶಿವಪುರ ಗ್ರಾಮಪಂಚಾಯ್ತಿ ವ್ಯಾಪ್ತಿಯ ಬಂಡೇ ಬಸಾಪುರ ತಾಂಡದಿಂದ 1500ಜನ ಗುಳೇ ಹೊರಟಿದ್ದಾರೆ.
ತಾಲೂಕಿನಲ್ಲಿ ಉದ್ಯೋಗ ಸೃಷ್ಟಿ ಯಾಗಬೇಕಿದೆ ಗುಳೇ ಹೋಗುವುದರಿಂದಾಗಿ,ಯುವ ಪೀಳಿಗೆ ಶೈಕ್ಷಣಿಕ ವಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ.ವೃದ್ಧರು ಅನಾರೋಗ್ಯಕ್ಕೆ ತುತ್ತಾಗಿ ಅನಾಥರಾಗಿ ಕೊನೆಯುಸಿರು ಎಳೆಯುವಂತಾಗುತ್ತಿದೆ.
ತಾಂಡದಲ್ಲಿ ಅಪರಾಧ ಪ್ರಕರಣಗಳು ಎತೇಚ್ಚವಾಗುವ ಸಾಧ್ಯತೆ ಹೆಚ್ಚು…
ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030