ವರದಿ ಜೂನ್ 21ಕೂಡ್ಲಿಗಿ
19 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಂದೋಲನ ಕೂಡ್ಲಿಗಿ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನಾದ್ಯಂತ ಈದಿನ ಬೆಳಿಗ್ಗೆ 9 ಗಂಟೆಯಿಂದ ಲಸಿಕೆ ಅಭಿಯಾನ ತಾಲೂಕು ಆರೋಗ್ಯ ಇಲಾಖೆ ಪ್ರಾರಂಭಿಸಿದ್ದು ಕೂಡ್ಲಿಗಿ ತಾಲೂಕಿನಲ್ಲಿ ಕೋವಿಡ್-19 ತಡೆಗಟ್ಟಲು ಲಸಿಕೆಯನ್ನು ನೀಡಲಾಗಿದ್ದು ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕಾಗಿದೆ ಆದರೆ ಗ್ರಾಮೀಣ ಪ್ರದೇಶದ ಜನರಲ್ಲಿ ವ್ಯಾಕ್ಸಿಂಗ್ ಬಗ್ಗೆ ತಪ್ಪು ಅಭಿಪ್ರಾಯಗಳು ಮೂಡಿದ್ದು ವ್ಯಾಕ್ಸಿನ್ ಹಾಕಿಸಿಕೊಂಡರೆ ನಮಗೆ ತೊಂದರೆಗಳಾಗುತ್ತವೆ ಪ್ರಾಣ ಅಪಾಯ ಆಗುತ್ತಿದೆ ವ್ಯಾಕ್ಸಿಂಗ್ ನಿಂದ ಅಪಾಯಕಾರಿ ಅದನ್ನು ಹಾಕಿಸಿಕೊಳ್ಳಬಹುದು ಎಂಬ ಅಭಿಪ್ರಾಯಗಳು ಜನರ ಮನಸ್ಸಿನಲ್ಲಿ ಈಗಾಗಲೇ ಮೂಡಿದ್ದು ಹೆಚ್ಚು ಜನರು ಪಡೆಯಲು ಹಿಂದುಳಿಯುತ್ತಿದ್ದಾರೆ ಇದರ ಬಗ್ಗೆ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಆದರೂ ಕೂಡ್ಲಿಗಿ ಪಟ್ಟಣ ಪಂಚಾಯತಿ ವ್ಯಾಪ್ತಿಯ 20 ವಾರಗಳ ಒಳಗೊಂಡಂತೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ಫಕ್ರುದಿನ್ ಸಾಬ್ ಅವರ ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಪಟ್ಟಣದ 5 ಸ್ಥಳಗಳಲ್ಲಿ ಅಂಬೇಡ್ಕರ್ ನಗರ ಸೂಲ್ಲಮ್ಮ ಗುಡಿ ಶಾಲೆ ರಾಜೀವ್ ಗಾಂಧಿನಗರ ಮೀನ್ ಬೈ ಸ್ಕೂಲ್ ಈ ಪ್ರದೇಶಗಳಲ್ಲಿ ಪ್ರತಿಯೊಬ್ಬ ಸಾರ್ವಜನಿಕರಿಗೂ 18 ವರ್ಷ ಮೇಲ್ಪಟ್ಟವರಿಗೆ ಕೋವಿಂದ್ 19 ವೈರಸ್ನಿಂದ ರಕ್ಷಿಸಿಕೊಳ್ಳಲು ವ್ಯಾಕ್ಸಿನ್ ನೀಡಲಾಗುತ್ತಿದೆ ಇದರ ಸದುಪಯೋಗ ಕೂಡ್ಲಿಗಿ ಪಟ್ಟಣದ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ಕೋರಿದ್ದಾರೆ ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಈಶಪ್ಪ ಆರೋಗ್ಯ ಸಿಬ್ಬಂದಿ ಇತರರು ಉಪಸ್ಥಿತರಿದ್ದರು
(ಬಾಕ್ಸ್ ಐಟಮ್ಸ್.. ಕೂಡ್ಲಿಗಿ ತಾಲೂಕಿಗೆ 5000 ವ್ಯಾಕ್ಸಿಂಗ್ ಬಂದಿದ್ದು ಬೆಳಗಟ್ಟ ಆರೋಗ್ಯ ಕೇಂದ್ರಕ್ಕೆ ಐದುನೂರು ಗುಡೆಕೋಟೆ ಐದುನೂರು ಹುಡೇಮ್ 400 ಆಲೂರು 350 ಹೊಸಳ್ಳಿ 500 ತೂಲಹಳ್ಳಿ 350ಕೊಟ್ಟೂರು 900 ತಿಮ್ಮಲಾಪುರ 1000 ತಾಲೂಕಿನ ಎಲ್ಲಾ ಆರೋಗ್ಯ ಕೇಂದ್ರಗಳಿಗೆ ವ್ಯಾಕ್ಸಿನ್ ವಿತರಿಸಿದ್ದು ಈ ದಿನದಿಂದಲೇ 18 ವರ್ಷ ಮೇಲ್ಪಟ್ಟವರಿಗೆ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ನೀಡಲಾಗುವುದು… ಷಣ್ಮುಖ ನಾಯಕ್ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಕೂಡ್ಲಿಗಿ.
ವರದಿ.ಡಿ.ಎಂ.ಈಶ್ವರಪ್ಪಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030