ಕಾಂಗ್ರೆಸ್ ಅಭ್ಯರ್ಥಿ ಈ. ತುಕಾರಾಂ ಅವರನ್ನು ಗೆಲ್ಲಿಸಿ. ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿಗಾಗಿ ಜೋಡಿ ಎತ್ತುಗಳಂತೆ ಕೆಲಸ ಮಾಡುತ್ತೇವೆ ಎಂದ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ.
ಕೂಡ್ಲಿಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ಕೂಡ್ಲಿಗಿ, ಹೊಸಹಳ್ಳಿ ಮತ್ತು ಗುಡೇಕೋಟೆ ಭಾಗದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದದ ಕಾಂಗ್ರೆಸ್ ಪಕ್ಷದ ವತಿಯಿಂದ ಬಹಿರಂಗ ಮತಪ್ರಚಾರವನ್ನು ದಿ.18-04-24 ರಂದು ಹಮ್ಮಿಕೊಳ್ಳಲಾಗಿತ್ತು. ಮಾನ್ಯಶಾಸಕರು ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ನಂಜುಂಡಪ್ಪ ವರದಿ ಹೇಳುವಂತೆ, ಕೂಡ್ಲಿಗಿ ತಾಲೂಕಿನ ಬಡತನದ ಹಣೆ ಪಟ್ಟಿ ಕಳಚಿ, ಶಿಕ್ಷಣ, ಆರೋಗ್ಯ, ಉದ್ಯೋಗಕ್ಕಾಗಿ ಒತ್ತು ಕೊಡಲು ಶಾಶ್ವತವಾದ ಯೋಜನೆಗಳನ್ನು ತರುತ್ತೇವೆ.
ಅತೀ ಶೀಘ್ರದಲ್ಲೇ ಕೂಡ್ಲಿಗಿ ತಾಲೂಕಿನ 74 ಕೆರೆಗಳನ್ನು ತುಂಬಿಸುತ್ತೇವೆ.
ಬರ ನಿರ್ವಹಣೆ ಮಧ್ಯೆಯೂ ಅತೀ ತುರ್ತಾಗಿ ನಮ್ಮಲ್ಲಿ 6 ಪಟ್ಟಣಗಳು ಹಾಗೂ 600 ಕ್ಕಿಂತ ಹೆಚ್ಚಿನ ಹಳ್ಳಿಗಳಿಗೆ ಭದ್ರ ನದಿಯಿಂದ ಕುಡಿಯುವ ನೀರನ್ನು ಒದಗಿಸಿದ್ದೇವೆ.
ನನಗೆ ಅಧಿಕಾರ ಇರಲಿ – ಬಿಡಲಿ , ನಮ್ಮ ಕೂಡ್ಲಿಗಿ ಕ್ಷೇತ್ರದ ಜನರ ಆರೋಗ್ಯದ ಒಳಿತಾಗಿ ಪ್ರತಿ ಕುಟುಂಬಕ್ಕೂ ನನ್ನದೇ ಆದ “ಆರೋಗ್ಯ ಗ್ಯಾರಂಟಿ” ಯೋಜನೆಯನ್ನು ಕೊಡುತ್ತೇನೆ ಎಂದೂ ಹೇಳಿದರು.
ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿಗಾಗಿ ನನಗೆ ನೀವುಗಳು ಕೊಟ್ಟ ಬಹುಮತದಂತೆ , ಅದರ ಎರಡು ಪಟ್ಟು ಬಹುಮತದ ಅಂತರದಿಂದ ಸನ್ಮಾನ್ಯರಾದ ನನ್ನ ಸಹೋದರ ಈ. ತುಕಾರಾಂ ಅವರನ್ನು ಬೆಂಬಲಿಸಬೇಕು ಎಂದೂ ಕಳಕಳಿಯಿಂದ ಮನವಿ ಮಾಡಿಕೊಂಡರು.
ಈ ವೇಳೆ ಸನ್ಮಾನ್ಯ ಸಚಿವರಾದ ಶ್ರೀ ಸಂತೋಷ್ ಎಸ್ ಲಾಡ್, ಅಭ್ಯರ್ಥಿಯಾದ ಸನ್ಮಾನ್ಯ ಈ. ತುಕಾರಾಂ. ಮಾಜಿ ಸಚಿವರಾದ ಎನ್.ಎಮ್. ನಬಿಸಾಬ್, ಇನ್ನೂ ಅನೇಕ ಗಣ್ಯಮಾನ್ಯರು, ಮುಖಂಡರು ಹಾಗೂ ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು…
ವರದಿ. ಬಸವರಾಜ್,ಎಂ, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030