ಕೂಡ್ಲಿಗಿ:ಭಕ್ತವೃಂದದ ನಡುವೆ ನಡೆದ ಶ್ರೀಕೊತ್ತಲಾಂಜನೇಯ ರಥೋತ್ಸವ…!!!

Listen to this article

ಕೂಡ್ಲಿಗಿ: ಶ್ರೀಕೊತ್ತಲಾಂಜನೇಯ ರಥೋತ್ಸವ-ವಿಜಯನಗರ ಜಿಲ್ಲೆ ಕೂಡ್ಲಿಗಿ:ಶ್ರೀರಾಮ ನವಮಿಯಂದು ಪಟ್ಟಣದಲ್ಲಿ, ಶ್ರೀಕೊತ್ತಲಾಂಜನೇಯ ರಥೋತ್ಸವ ಜರುಗಿತು. ಮೂರು ದಿನಗಳ ಮುನ್ನವೇ ರಥೋತ್ಸವ ಪೂರ್ವತಯಾರಿ, ಹಾಗೂ ವಿವಿದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಎ17ರಂದು ಸಂಜೆ ಶ್ರೀಕೊತ್ತಲಾಂಜನೇಯ ರಥೋತ್ಸವ ಬಹು ವಿಜೃಂಭಣೆಯಿಂದ ಜರುಗಿತು, ಪಟ್ಟಣ ಸೇರಿದಂತೆ ವಿವಿದೆಡೆಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತರು ರಥೋತ್ಸವದಲ್ಲಿ ಭಾಗಿಯಾದರು. ಅಂತೆಯೇ ತಾಲೂಕಿನ ಕುಪ್ಪಿನಕೇರಿ ಗ್ರಾಮದಲ್ಲಿ, ಶ್ರೀ ಆಂಜನೇಯ ರಥೋತ್ಸವ ಬಹು ವಿಜೃಂಭಣೆಯಿಂದ ಜರುಗಿತು. ಕುಪ್ಪಿನ ಸಮಸ್ತ ಗ್ರಾಮಸ್ಥರು ಸೇರಿದಂತೆ, ವಿವಿದ ಗ್ರಾಮಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತರು ಸಾಕ್ಷಿಯಾದರು. ದ‍ಾಖಲು ಮೊತ್ತದಲ್ಲಿ ದೇವರ ಪಟ ಹರಾಜು ಪಡೆದ ವಿ.ಬಿ.ಸುನೀಲ ಕುಮಾರ- ಕೂಡ್ಲಿಗಿ ಪಟ್ಟಣದ ಶ್ರೀಕೊತ್ತಲಾಂಜನೇಯ ರಥೋತ್ಸವ ಸಂದರ್ಭದಲ್ಲಿ, ಭಕ್ತಿ ಪೂರ್ವಕವಾಗಿ ಭಕ್ತಾದಿಗಳು ಹರಾಜು ಮೂಲಕ ಪಡೆಯುವ ಪಟ ಹರಾಜು ಜರುಗಿತು. ಪಟ ಹರಾಜು ಈ ಭಾರಿ ದಾಖಲು ಮೊತ್ತದಲ್ಲಿ ಹರಾಜಾಗಿದೆ, ಪಟ್ಟಣದ ವಾಲ್ಮೀಕಿ ಸಮಾಜದ ಯುವ ಮುಖಂಡ ವಿ.ಬಿ.ಸುನೀಲಕುಮಾರವರು ಎಂಟು ಲಕ್ಷ ಒಂದು ನೂರ ಒಂದು ರೂ(8,00101₹)ಗಳಿಗೆ ಪಡೆದಿದ್ದಾರೆ…

ವರದಿ..ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend