ಕೂಡ್ಲಿಗಿ:ವಿಶ್ವ ಬಾಯಿ ಆರೋಗ್ಯ ದಿನಾಚರಣೆ-ತಪಾಸಣೆ ಜಾಗೃತಿ ಶಿಬಿರ-ವಿಜಯನಗರ ಜಿಲ್ಲೆ ಕೂಡ್ಲಿಗಿ:ಮಾ20_ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಸಾರ್ವಜನಿಕ ಆಸ್ಪತ್ರೆ ವತಿಯಿಂದ. “ರಾಷ್ಟ್ರೀಯ ಬಾಯಿ ಆರೋಗ್ಯ ದಿನಾಚರಣೆ” ಕಾರ್ಯಕ್ರಮದಡಿಯಲ್ಲಿ, ‘ಆರೋಗ್ಯಕರ ಬಾಯಿ-ಆರೋಗ್ಯಕರ ದೇಹ’ ಎಂಬ ಘೋಷವಾಕ್ಯದೊಂದಿಗೆ. ಪಟ್ಟಣದ ಆಜಾದ್ ನಗರದಲ್ಲಿರುವ, ಅಂಗನವಾಡಿ ಬಿ ಕೇಂದ್ರದಲ್ಲಿ. ಸಾರ್ವಜನಿಕ ಆಸ್ಪತ್ರೆಯ ದಂತ ವೈದ್ಯರಾದ ರಮ್ಯರವರು, ನೆರೆದಿದ್ದ ಮಕ್ಕಳ ಪೋಷಕರಿಗೆ ತಿಳುವಳಿಕೆ ನೀಡಿದರು. “ಬಾಯಿ ಆರೋಗ್ಯ” ಸ್ವಚ್ಛತೆ, ಹಾಗೂ ಪೌಷ್ಟಿಕ ಆಹಾರದ ಕುರಿತು ಅರಿವು ಮೂಡಿಸಿದರು. ಮಕ್ಕಳನ್ನು ಸಾಧ್ಯವಾದಷ್ಟು ಬೇಕರಿ ಸಿಹಿ ತಿಂಡಿ ತಿನಿಸುಗಳಿಂದ ದೂರವಿಡಬೇಕು, ಪ್ರತಿ ದಿನವೂ ಎರಡು ಬಾರಿ ಅಂದರೆ ಬೆಳಿಗ್ಗೆ ಎದ್ದ ತಕ್ಷಣ ಮಲಗುವ ಮುನ್ನ, ಬಾಯಿ ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ದಂತ ವೈದ್ಯರನ್ನು ಸಂಪರ್ಕಿಸಿ ತಪಾಸಣೆಗೊಳಗಾಗಬೇಕು, ಸಲಹೆ ಸೂಚನೆ ಪಡೆದು ಪಾಲಿಸಬೇಕು ಎಂದು ಸೂಚಿಸಿದರು. ನಂತರ ಅವರು ಹಾಜರಿದ್ದ ಮಕ್ಕಳ, ದಂತ ತಪಾಸಣೆ ಮಾಡಿದರು. ನಂತರ ತಪಾಸಣೆಗೊಳಗಾದ ಮಕ್ಕಳಲ್ಲಿ, ಹೆಚ್ಚಿನ ಚಿಕಿತ್ಸೆ ಅಗತ್ಯ ಇರೋ ಮಕ್ಕಳನ್ನು. ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದು, ತಮ್ಮನ್ನು ಸಂಪರ್ಕಿಸಲು ಮಕ್ಕಳ ಪಾಲಕರಿಗೆ ತಿಳಿಸಿದರು. ಶಿಬಿರದಲ್ಲಿ ವಿಶೇಷವಾಗಿ ಮಕ್ಕಳಿಗೆ ಟೂತ್ ಪೇಸ್ಟ್, ಹಾಗೂಟುತ್ ಬ್ರಷ್ ಗಳನ್ನು ವಿತರಿಸಲಾಯಿತು. ಮತ್ತು ಟೂತ್ ಬ್ರಷ್ ನ್ನು ಹಲ್ಲಿನ ಸ್ವಚ್ಚತೆಗೆ ಹೇಗೆ ಬಳಸಬೇಕೆಂಬುದನ್ನು, ಪ್ರಾಯೋಗಿಸಕವಾಗಿ ತೋರಿಸಿ ಅರ್ಥಮಾಡಿಸಲಾಯಿತು. NCD ಆಪ್ತ ಸಮಾಲೋಚಕರಾದ ಎಂ.ನಾಗರತ್ನ ರವರು, ಅಸಂಕ್ರಾಮಿಕ ರೋಗಗಳ ತಪಾಸಣೆ ಮಾಡಿದರು. RKSKಆಪ್ತ ಸಮಾಲೋಚಕ ಓಬಣ್ಣ, ಅಂಗನವಾಡಿ ಸಹಾಯಕರಾದ ನಿರ್ಮಲ, ಹಾಗೂ ಆಶಾ ಕಾರ್ಯಕರ್ತೆ ಪದ್ಮಾ ಭಾಗಿಯಾಗಿದ್ದರು…
ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030