ಬೆಂಗಳೂರು:ಅಲೆಮಾರಿ ಸಮುದಾಯಗಳ ಬೃಹತ್ ಜಾಗೃತಿ ರಾಜ್ಯ ಸಮ್ಮೇಳನ- ಬೆಂಗಳೂರು: ಡಾ”ಬಿ.ಆರ್.ಅಂಬೇಡ್ಕರ್ ಭವನದಲ್ಲಿ, ಮಾ15ರಂದು ಅಲೆಮಾರಿ ಸಮುದಾಯಗಳ ಬೃಹತ್ ಜಾಗೃತಿ ರಾಜ್ಯ ಸಮ್ಮೇಳನ ಜರುಗಿತು. SC ST ಅಲೆಮಾರಿ, ವಿಮುಕ್ತ ಬುಡಕಟ್ಟು ಸಂಘಟನೆಗಳ ರಾಜ್ಯ ಒಕ್ಕೂಟದ ಸಹಯೋಗದೊಂದಿಗೆ, ಕರ್ನಾಟಕ ಅಲೆಮಾರಿ ಸಿಳ್ಳೇಕ್ಯಾತರ ರಾಜ್ಯ ಸಮಿತಿ ರಾಜ್ಯ ಮಟ್ಟದ ಜಾಗೃತಿ ಬೃಹತ್ ಸಮಾವೇಶ ಆಯೋಜಿಸಿತ್ತು. ಸಮಾವೇಶದಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿರವರು, ವೇದಿಕೆಯ ಮುಂಭಾಗದಲ್ಲಿರಿದ್ದ. ಬುದ್ಧ ಬಸವಣ್ಣ ಡಾ”ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜದ ಹಿರಿಯರು ಹಾಗೂ ಗಣ್ಯರು, ಸಮಾಜದ ಏಳ್ಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಸಿಕೊಂಡಿರುವ ಸಮಾಜದ ಹಿರಿಯರು, ವಿವಿದ ಜನಪ್ರತಿನಿಧಿಗಳು ಹಾಗೂ ಸಮಾಜದವರಾದ ವಿವಿದ ಇಲಾಖೆಗಳ ಅಧಿಕಾರಿಗಳು ನೌಕರರು ವೇದಿಕೆಯಲ್ಲಿದ್ದರು.
ಮತ್ತು ವಿವಿದ ಕರ್ನಾಟಕ ಅಲೆಮಾರಿ ಶಿಳ್ಳೆಕ್ಯಾತರ ರಾಜ್ಯ ಸಮಿತಿ ರಾಜ್ಯಧ್ಯಕ್ಷರಾದ ಆದರ್ಶ ಯಲ್ಲಪ್ಪ, ಮಹಿಳಾ ರಾಜ್ಯಧ್ಯಕ್ಷರಾದ ಶ್ರೀಮತಿ ಜಿ. ಮಲ್ಲವಿ, ಮತ್ತು ರಾಜ್ಯ ಕಾರ್ಯಧ್ಯಕ್ಷರಾದ ವೆಂಕಟೇಶ ದೊರೆ, ರಾಜ್ಯ ಉಪಾಧ್ಯಕ್ಷರಾದ ಲೋಹಿತಾಕ್ಷ ಹಾಗೂ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ದಾಯತ್ಕರ್, ಕೆ.ಪಿ.ಸಿದ್ದಪ್ಪಾಜಿ ಸೇರಿದಂತೆ ಸಮಿತಿಯ ಸರ್ವ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು. ರಾಜ್ಯ ಸಮಿತಿ ವಿವಿದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಭಾಗಿಯಾಗಿದ್ದರು. ವಿವಿದ ರಾಜ್ಯಗಳ ರಾಜ್ಯ ಕಮಿಟಿ ಪದಾಧಿಕಾರಿಗಳು, ರಾಜ್ಯದ ವಿವಿದ ಜಿಲ್ಲೆಗಳ ಜಿಲ್ಲಾ ಕಮಿಟಿ ಸದಸ್ಯರು. ವಿವಿದ ತಾಲೂಕು ಘಟಕಗಳ ಪದಾಧಿಕಾರಿಗಳು, ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಸಮಾಜದ ಪ್ರಮುಖರು, ಸಮಾವೇಶದಲ್ಲಿ ಭಾಗಿಯಾಗಿದ್ದರು. ಸಮಾವೇಶದಲ್ಲಿ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ, ಜಿಲ್ಲಾ ಘಟಕಗಳ ಪದಾಧಿಕಾರಿಗಳು. ಹಾಗೂ ವಿವಿದ ತಾಲೂಕು ಘಟಕಗಳ ಪದಾಧಿಕಾರಿಗಳು, ಭಾಗಿಯಾಗಿದ್ದರೆಂದು ಸಂಘಟನೆಯ ಮಹಿಳಾ ಮುಖಂಡರಾದ ಶ್ರೀಮತಿ ಗೌರಮ್ಮ ಶಿಂಧೆಯವರು ಮಾಹಿತಿ ನೀಡಿದ್ದಾರೆ. ಅವರು ತಮ್ಮ ಸಹಪಾಟಿಗಳೊಂದಿಗೆ ಸಮಾವೇಶದಲ್ಲಿ, ಸಕ್ರೀಯವಾಗಿ ಪಾಲ್ಗೊಂಡಿದ್ದಾರೆ….
ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030