ಕಾರ್ಮಿಕರಿಗೆ ಆಸರೆಯಾದ ಮಹಾತ್ಮ ಗಾಂಧಿ ಉದ್ಯೋಗ ಖಾತರಿ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆ ಮ್ಯಾಸರಹಟ್ಟಿ ಗ್ರಾಮದಲ್ಲಿ ಬೇಸಿಗೆಯ ದಿನಗಳಲ್ಲಿ, ಕೆಲಸವಿಲ್ಲದೆ ಅಲೆದಾಡುತ್ತಿರುವ ಕಾರ್ಮಿಕರಿಗೆ ನೆಲೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ, ಗ್ರಾಮದ ಕೆರೆಯಲ್ಲಿ ಊಳೆತ್ತುವ ಕಾಮಗಾರಿ, ಬರದಿಂದ ಸಾಗುತ್ತಿದೆ.
ನಂತರ ಮಾಜಿ ತಾಲೂಕ ಪಂಚಾಯಿತಿ ಸದಸ್ಯ ಶ್ರೀಮತಿ ನೇತ್ರಮ್ಮ ಜಿ ಓಬಣ್ಣ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ದಿನಗೂಲಿ,312 ರೂ ಗಳು ಸರ್ಕಾರ ನಿಗದಿಪಡಿಸಿದೆ, ಈ ಯೋಜನೆಯಲ್ಲಿ ಪ್ರತಿಯೊಬ್ಬ ಕಾರ್ಮಿಕರು, ಕೆಲಸಕ್ಕೆ ಹಾಜರಾಗಿ ಕೂಲಿ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ದುರ್ಗಮ್ಮ ದುರ್ಗಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ತಿಪ್ಪಮ್ಮ ನಾಗರಾಜ್ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಈ ಶರಣೇಶ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಎಚ್ ಪಾಪಣ್ಣ, ದಾಸಪ್ಪ, ಶ್ರೀಮತಿ ಸಾಕಮ್ಮ ಬೋರಣ್ಣ, ಶ್ರೀಮತಿ ಸಾವಿತ್ರಮ್ಮ, ಗುರು ಚಿನ್ನಯ್ಯ, ಶ್ರೀಮತಿ ಚನ್ನಬಸಮ್ಮ ಬಸಣ್ಣ, ಕಾಂಗ್ರೆಸ್ ಮುಖಂಡ ಏ ರಾಜಣ್ಣ, ಮುಖಂಡರುಗಳಾದ ಮೀಸೆ ಬೋರಣ್ಣ, ಗೋಪಾಲಿ, ಹೇಮಂತ್ ರಾಜ್, ಸಣ್ಣ ಲೋಕಣ್ಣ, ಜಿ ಎಸ್ ಪಾಪು ಮುತ್ತಿ, ಎನ್ ನಾಗೇಂದ್ರಪ್ಪ , ಹಾಗೂ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಸದಸ್ಯರುಗಳು ಅಸಂಘಟಿತ ಕಾರ್ಮಿಕರು ಇದ್ದರು…
ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030