*ಕೂಡ್ಲಿಗಿ:ಪೂರ್ವಜರ ಸ್ಮರಣಾರ್ಥ ಆಹಾರ ಕಿಟ್ಟ್ ವಿತರಣೆ*-
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ದಿವಂಗತ ಫಕ್ರುದ್ದೀನ್ ಸಾಬ್ ಅಬ್ದುಲ್, ಅಜ್ಮತ್ ಉಲ್ಲಾ,ಮಹಮ್ಮದ್ ಖಾಸಿಂ, ದಿವಂಗತ ಇವರ ತಮ್ಮಂದಿರಾದ ಕಾಂಟ್ರಾಕ್ಟರ್,ಇಸ್ಮಾಯಿಲ್, ರಹಮತ್ಲ್ಲಾ, ಇವರ ಮಕ್ಕಳಾದ ಅಬ್ದುಲ್ ರಹ್ಮಾನ್, ನನ್ನೆ ಸಾಹೇಬ್ ಮಹಮ್ಮದ್ ಇಸಾಕ್ ಟೀಚರ್ ಇಂಜಿನಿಯರ್ ನಿಸಾರ್ ಅಹಮದ್ ಅಜ್ಮ್ ಬಾಷಾ ಖಾದರ್ ಭಾಷಾ ನಜೀರ್ ಅಹಮದ್ ಇಂದು ಪಟ್ಟಣ ಪಂಚಾಯಿತಿ ಪೌರಕಾರ್ಮಿಕರಿಗೆ. ತಮ್ಮ ಪೂರ್ವಜರ ಸ್ಮರಣಾರ್ಥ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ, 65ನಿರ್ಗತಿಕರಿಗೆ ರೇಷನ್ ಕಿಟ್ ವಿತರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಅಬ್ದುಲ್ ರಹ್ಮಾನ್ ಮಾತನಾಡಿ,ತಾವು ತಮ್ಮ ಸಹೋದರರೊಡಗೂಡಿ ಪೂರ್ವಜರ ಸ್ಮರಣಾರ್ಥವಾಗಿ ಬಡವರಿಗೆ ಆಹಾರದ ಕಿಟ್ ನೀಡೋಮೂಲಕ ಅತ್ತ್ಯಲ್ಪ ಸೇವೆ ಮಾಡುತಿದ್ದು.
ಅಲ್ಲಾಹನು ಎಲ್ಲರನ್ನೂ ಕೊರೋ ನಾ ದಿಂದ ರಕ್ಷಿಸಲಿ,ಆ ಪರಮಾತ್ಮ ಸರ್ವರಿಗೂ ಒಳ್ಳೆಯದನ್ನೇ ಮಾಡಲಿ, ಪ್ರಪಂಚವನ್ನ ಕರೋನಾ ಮುಕ್ತಗೊಳಿಲೆಂದು ಸಂಕಲ್ಪ ತೊಟ್ಟು,ದೇವರಲ್ಲಿ ತಾವು ತಮ್ಮ ಕುಟುಂಬ ಸಮೇತಾವಾಗಿ ಪ್ರಾರ್ಥಿಸುವುದಾಗಿ ಅವರು ತಿಳಿಸಿದರು. *ಡಿ ಎಂ ಈಶ್ವರಪ್ಪ ಸಿದ್ದಾಪುರ*
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030