ಕಾನಮಡುಗು ಶರಣಬಸವೇಶ್ವರ ಜಾತ್ರೆ ಪೂರ್ವಭಾವಿ ಸಭೆ…!!!

Listen to this article

ಶರಣಬಸವೇಶ್ವರ ಜಾತ್ರೆ ಪೂರ್ವಭಾವಿ ಸಭೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಕಾನಮಡಗು ಶ್ರೀ ಶರಣಬಸವೇಶ್ವರ ರಥೋತ್ಸವದ ಪ್ರಯುಕ್ತ ಶಾಂತಿ ಸಭೆ ಜರಗಿತು.
ಕಾನಾಮಡುಗು ದಾಸೋಹ ಮಠದ ಆವರಣದಲ್ಲಿ ದಿನಾಂಕ 13 12 2021 ರಂದು ಜರುಗಲಿರುವ ಶ್ರೀ ಶರಣಬಸವೇಶ್ವರ ರಥೋತ್ಸವದ ಪ್ರಯುಕ್ತ ಮುಂಜಾಗೃತಾ ಕ್ರಮವಾಗಿ ಶಾಂತಿ ಸಭೆ ಜರಗಿತು.
ಈ ಸಭೆಯನ್ನುದ್ದೇಶಿಸಿ ಕಾನಹೊಸಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಣ್ಣ ಚಾಮನೂರು ಅವರು ಮಾತನಾಡಿ ಕೋವಿಡ್ ಮೂರನೇ ಅಲೆ ವ್ಯಾಪಕವಾಗಿ ಹರಡುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶವನ್ನು ಪಾಲಿಸೋಣ.. ಗುಂಪು ಗುಂಪಾಗಿ ಸೇರಬಾರದು. ಮತ್ತು ಪ್ರತಿಯೊಬ್ಬರೂ ಒಂದನೇ ಮತ್ತು ಎರಡನೇ ಲಸಿಕೆಯನ್ನು ಹಾಕಿಸಿ ಕೊಂಡಿರಬೇಕು. ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು ಎಂದು ತಿಳಿಸಿದರು.
ಇದೇ ಕಾರ್ಯಕ್ರಮದಲ್ಲಿ ಕಾನಾಮಡುಗು ಶ್ರೀ ಶರಣಬಸವೇಶ್ವರ ದಾಸೋಹ ಮಠದ ಧರ್ಮಾಧಿಕಾರಿಗಳಾದ ಐಮಡಿ ಶರಣಾರ್ಯರು. ಉಪತಹಸೀಲ್ದಾರ್ ಚಂದ್ರಮೋಹನ್. ಕಂದಾಯ ಪರಿವೀಕ್ಷಕರಾದ ಮುರಳಿಕೃಷ್ಣ. ಎ.ಎಸ್ಎ ಗೋವಿಂದಪ್ಪ .ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಂಗಪ್ಪ. ಹಾಗೂ ಕಾನಮಡುಗು ಗ್ರಾಮದ ಮುಖಂಡರು ಯುವಕರು ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ವಿರೇಶ್, ಕೆ, ಎಸ್, ಕಾನಹೋಸಹಸಲ್ಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend