ಹೊಸಹಳ್ಳಿ ಆಲೂರಿನಲ್ಲಿ ವಿಧಾನಪರಿಷತ್ ಚುನಾವಣೆಯ ಪ್ರಚಾರ ಸಭೆ…!!!

Listen to this article

ಹೊಸಹಳ್ಳಿ ಆಲೂರಿನಲ್ಲಿ ವಿಧಾನಪರಿಷತ್ ಚುನಾವಣೆಯ ಪ್ರಚಾರ ಸಭೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ
ತಾಲೂಕಿನ ಹೊಸಳ್ಳಿ ಹೋಬಳಿಯ ಆಲೂರಿನಲ್ಲಿ ಭಾರತೀಯ ಜನತಾ ಪಕ್ಷದ ಗ್ರಾಮ ಪಂಚಾಯತಿ ಸದಸ್ಯರ ಕಾರ್ಯಕರ್ತರ ಮುಖಂಡರ ವಿಧಾನಪರಿಷತ್ ಚುನಾವಣೆಯ ಪ್ರಚಾರ ಸಭೆ ಆಲೂರಿನಲ್ಲೀ ನಡೆಯಿತು. ಸಭೆಯಲ್ಲಿ ಹಿರಿಯ ಬಿಜೆಪಿ ಮುಖಂಡರು ರಾಜ್ಯ ಪರಿಷತ್ ಸದಸ್ಯರು ಆದ ಕೆ.ಎಂ .ತಿಪ್ಪೇಸ್ವಾಮಿಯವರು ಮಾತನಾಡಿ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಸರ್ಕಾರ ಇದ್ದು ಉತ್ತಮ ಆಡಳಿತ ನಡೆಸುತ್ತಿದೆ .ನಮ್ಮ ಕ್ಷೇತ್ರದ ಶಾಸಕರಾದ ಮಾನ್ಯ ಗೋಪಾಲಕೃಷ್ಣರವರು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ,ರಸ್ತೆ ನಿರ್ಮಾಣ ,ಕುಡಿಯುವ ನೀರು ಹಾಗೂ ಆಲೂರು ಪಂಚಾಯತಿಯಲ್ಲಿ ಅಮೃತ ಗ್ರಾಮ ಯೋಜನೆ, ಆಸ್ಪತ್ರೆಯ ಕಾಂಪೌಂಡ್ ನಿರ್ಮಾಣ, ಮುಂತಾದ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಆದ್ದರಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ವೈ ಎಂ ಸತೀಶ್ ರವರಿಗೆ ಮತ ಹಾಕುವುದರಮೂಲಕ ಗೆಲ್ಲಿಸಬೇಕೆಂದು ತಿಳಿಸಿದರು. ಬಿಜೆಪಿ ಮುಖಂಡರಾದ ಕೆ.ಜಿ. ಮಂಜಣ್ಣನವರು ಮಾತನಾಡಿ ಶಾಸಕರು ಪ್ರತಿ ಹಳ್ಳಿಗಳಲ್ಲಿ ರಸ್ತೆ , ಕುಡಿಯುವ ನೀರು ಹೈಮಾಸ್ಕ ವಿದ್ಯುದ್ದೀಪ , ಬಸ್ ಸ್ಟ್ಯಾಂಡ್ ಇನ್ನಿತರ ಮೂಲಸೌಲಭ್ಯಗಳನ್ನು ಒದಗಿಸಿರುತ್ತಾರೆ ಆದ್ದರಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ವೈ ಎಂ ಸತೀಶ್ ಅವರಿಗೆ ಮತ ನೀಡುವ ಮೂಲಕ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು. ಸಭೆಯಲ್ಲಿ ಗುಂಡುಮುಣುಗು ತಿಪ್ಪೇಸ್ವಾಮಿ .ಚಂದ್ರಮೌಳಿ, ಬಿಜೆಪಿ ತಾಲೂಕು ಅಧ್ಯಕ್ಷ ಚೆನ್ನಪ್ಪ , ಪದ್ಮನಾಭರೆಡ್ಡಿ ,ಕಾನಾಮಡುಗು ಜಯರಾಜು, ಕರಿಬಸವ ರೆಡ್ಡಿ,ಯಂಬಳೆ ಗಂಗಣ್ಣ, ದುರುಗಪ್ಪ, ಗ್ರಾಮ ಪಂಚಾಯತಿ ಮಾಜಿ ಹಾಲಿ ಸದಸ್ಯರು ಬಿಜೆಪಿ ಮುಖಂಡರು ಹಾಗೂಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು….

ವರದಿ. ಕೆ. ಎಸ್. ವಿರೇಶ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend