ಗಾಣಿಗರ ರಾಜ್ಯ ಮಟ್ಟದ ಸಮಾವೇಶಕ್ಕೆ ಪೂರ್ವಭಾವಿ ಸಭೆ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಗಾಣಿಗರ ಸಮುದಾಯ ಭವನದಲ್ಲಿ
ಗಾಣಿಗ ಸಮಾಜದ ರಾಜ್ಯಮಟ್ಟದ ಬೃಹತ್ ಸಮಾವೇಶ ನಡೆಸಲು ಹಾಗೂ ಗಾಣಿಗ ಸಮಾಜದ ನಿಗಮ ಸ್ಥಾಪನೆಗೆ ಒತ್ತಾಯಿಸಲು ಪೂರ್ವಭಾವಿ ಸಭೆಯು ಇಂದು ನಡೆಯಿತು
ಕಾರ್ಯಕ್ರಮದ ದಿವ್ಯ ಸಾನಿಧ್ಯ ಗಾಣಿಗ ಸಮಾಜದ ಗುರುಗಳಾದ ಶ್ರೀ
ಶ್ರೀ ಶ್ರೀ ಜಯಬಸವ ಕುಮಾರ ಸ್ವಾಮೀಜಿಗಳು ವಹಿಸಿದ್ದರು.
ಇದೇ ಸಂದರ್ಭದಲ್ಲಿ ಗಾಣಿಗ ಸಮಾಜದ ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ್ ಲೋಣಿ ಮಾತನಾಡಿ ರಾಜ್ಯಾದ್ಯಂತ ಗಾಣಿಗ ಸಮಾಜ ಅತ್ಯಂತ ಹಿಂದುಳಿದಿದ್ದು ಸಾಮಾಜಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಮತ್ತು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಸಿಗುವಂತಾಗಲಿ. ಮತ್ತು ಗಾಣಿಗ ಸಮಾಜದ ಪ್ರತ್ಯೇಕ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷರಾದ ಜಿ ಉಮೇಶ್. ಗಾಣಿಗ ಸಮಾಜದ ತಾಲೂಕ ಅಧ್ಯಕ್ಷರಾದ ಶೇಖರಪ್ಪ. ಮತ್ತು ಸಮುದಾಯದ ಮುಖಂಡರುಗಳಾದ ಧನಂಜಯ ಜರ್ಮಲಿ. ಎಸ್ ಕೊಟ್ರೇಶ್. ಕೆ ಸುಭಾಷ್ ಚಂದ್ರ. ಕಾಮಶೆಟ್ಟಿ ಬಸವರಾಜ್. ಯಜಮಾನಪ್ಪ. ರಾಜು ಬಣಕಲ್. ಸಣ್ಣವೀರಣ್ಣ ಹಾರಕಬಾವಿ. ಸೇರಿದಂತೆ ದಾವಣಗೆರೆ ಚಿತ್ರದುರ್ಗ ಕೊಪ್ಪಳ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಹಾಗೂ ತಾಲೂಕಾ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಸಮಾಜದ ಬಂಧುಗಳು ಸೇರಿದಂತೆ ಉಪಸ್ಥಿತರಿದ್ದರು…
ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030