ಸ್ವಾತಂತ್ರ ಕಹಳೆ ಮೊಳಗಿಸಿದ ಮೊಟ್ಟ ಮೊದಲ ಮಹಿಳೆ ವೀರ ಮಹಿಳೆ ಕಿತ್ತೂರಾಣಿ ಚೆನ್ನಮ್ಮ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸ ಹಳ್ಳಿ ಹೋಬಳಿಯ ಹೊಸಹಳ್ಳಿ ನಾಡಕಚೇರಿಯಲ್ಲಿ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಪೂಜಿ ಸಲ್ಲಿಸಿ ಜಯಂತಿಯನ್ನು ಆಚರಿಸಲಾಯಿತು.
ನಂತರ ಉಪ ತಹಶೀಲ್ದಾರ್
ಜಿ ಚಂದ್ರಮೋಹನ್ ಮಾತನಾಡಿ ಬ್ರಿಟಿಷರ ವಿರುದ್ಧ ಹೋರಾಡಿದ ಮೊಟ್ಟ ಮೊದಲ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ರವರ ಶೌರ್ಯ ರಾಷ್ಟ್ರಾಭಿಮಾನ ಹಾಗೂ ಉದಾತ್ತ ಮಾನವೀಯ ಗುಣಗಳು ಎಂದಿಗೂ ಆದರ್ಶಮಯವಾದವು. ಇಂತಹ ಹೋರಾಟಗಾರ್ತಿಯ ಬದುಕು ನಮ್ಮ ಇಂದಿನ ಯುವ ಜನಾಂಗಕ್ಕೆ ಪ್ರೇರಣಾದಾಯಕವಾಗಿದೆ. ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಾದ ಶ್ರೀನಿವಾಸ್ ಕೊಂಡಿ
ಮುರುಗೇಶ್ ಕುಂಬಾರ್ ಗ್ರಾಮ ಪಂಚಾಯತಿ ಸದಸ್ಯರಾದ ಹೊನ್ನೂರಪ್ಪ ಮತ್ತು ಶರಣಗೌಡ್ರು ಹರ್ಷಿತ್ ತಳವಾರ್ ಬೋರಪ್ಪ ಸೇರಿದಂತೆ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು..
ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030